ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದು ಮತ್ತು ನಾಳೆ ನಡೆಯಲಿರುವ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಕೃಷ್ಣ ವಾದಿರಾಜ ಮಠದಲ್ಲಿ ಪೂರ್ವ ಭಾವಿಯಾಗಿ ಗುರುವಾರ ಸಾಯಂಕಾಲ ಭಕ್ತರು ನೀಡಿದ ಧಾನ್ಯಗಳನ್ನು ಪೂಜಿಸಿ ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು. ಪೇಜಾವರ ಅಧೋಕ್ಷಜ ಮಠದ ಶಾಖೆಯಾದ ಶ್ರೀಮಠದಲ್ಲಿ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥರ ಆದೇಶದಂತೆ ಪ್ರತಿ ಸಲದಂತೆ ಈ ಸಲವೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶಾಸ್ತ್ರೋಕ್ತವಾಗಿ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ.
ಶ್ರೀ ಮಠದ ಪರವಾಗಿ ಗೌರವಾಧ್ಯಕ್ಷ ಗೋಪಾಲ ನಾಯಕ, ಮಠದ ಅಧ್ಯಕ್ಷರಾದ ಕಿರಣ ಚಳುಕಿ, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಧಾನ್ಯ ಪೂಜೆಯನ್ನು ನೇರವೇರಿಸಿದರು.
ಈ ಸಮಯದಲ್ಲಿ ಸಮಿತಿ ಸದಸ್ಯರಾದ ಡಾ ಆರ್.ಜೆ ಮಂಗಲಗಿ, ಡಾ.ಮಲಘಾಣ, ಉದ್ಯಮಿ ವ್ಹಿ.ಬಿ.ಕುಲಕರ್ಣಿ, ವಿಸಿ ಕುಲಕರ್ಣಿ ಪಿರಾಪುರ್. ಅಶೋಕರಾವ್, ವಿಕಾಸ ಪದಕಿ, ಗೋವಿಂದ ಜೋಶಿ, ವಿಜಯ್ ಜೋಶಿ. ಜಯತೀರ್ಥ ಮಂಗಲಗಿ, ವೇಣುಗೋಪಾಲ ಜೋಶಿ, ಶ್ರೀಕಾಂತ ತಿಕೋಟ್ಕರ್ . ವೆಂಕಟೇಶ್ ಗುಡಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಪಂಡಿತ ವಾಸುದೇವಾಚಾರ್ಯ ಪೂಜೆಯ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಭಕ್ತರ ಸಮ್ಮುಖದಲ್ಲಿ ನಡೆಸಿಕೊಟ್ಟರು. ಇ
ದೆ ಸಮಯದಲ್ಲಿ ಶ್ರೀ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಗಂಗಾಬಾಯಿ ಆದ್ಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಸೇವಕರಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕೊಡುಗೆಯಾಗಿ ವಸ್ತ್ರಗಳನ್ನು ನೀಡಲಾಯಿತು. ನಂತರ ಪಂಡಿತ ಪಾಂಡುರಂಗಾಚಾರ್ಯ ಪೂಜಾರ್ ಅವರಿಂದ ಮೂರು ದಿನಗಳ ಕಾಲ ನಡೆದ ಪ್ರವಚನ ಮಂಗಲ ನೆರವೇರಿತು.
ದಿನಾಂಕ ೪ ರಂದು ಶ್ರೀ ಕೃಷ್ಣನಿಗೆ ತುಳಸಿ ಅರ್ಚನೆ, ಮಹಿಳಾ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆಗಳು ನೆರವೇರಿದವು.

