ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ನವೋದ್ಯಮ ಮೆರಾಕಿಫಿ ಕಂಪನಿ ಆಯೋಜಿಸಿರುವ ಕ್ರಿಯೋಸ್ಫಿಯರ್ ಶೃಂಗಸಭೆ ಆಗಷ್ಟ 8 ರಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ನಡೆಯಲಿರುವ ಈ ಶೃಂಗಸಭೆತಲ್ಲಿ ಸೃಜನಶೀಲರು, ಉದ್ಯಮಿಗಳು ಮತ್ತು ನಾವೀನ್ಯಕಾಋನ್ನು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವೆರಿಡಿನ್ ಸಹಯೋಗದೊಂದಿಗೆ ಮೆರಾಕಿಫೈ ಆಯೋಜಿಸಿರುವ ಈ ಶೃಂಗಸಭೆ ಸೃಜನಶೀಲರು, ಉದ್ಯಮಿಗಳು, ವಿದ್ಯಾರ್ಥಿಗಳು, ಸ್ಟಾರ್ಟ್ಅಪ್ಗಳು, ಉದ್ಯಮ ವೃತ್ತಿಪರರು, ಹೂಡಿಕೆದಾರರು ಹಾಗೂ ನಾವೀನ್ಯಕಾರರು ಪಾಲ್ಗೊಂಡು ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಅಲ್ಲದೇ, ಈ ಶೃಂಗಸಭೆ ನವೋದ್ಯಮಿಗಳು ಅರ್ಥಪೂರ್ಣ ಪರಸ್ಪರ ಸಹಕಾರ ಬೆಳೆಸಿಕೊಳ್ಳುವ ಮೂಲಕ ನಾವೀನ್ಯತೆಯ ಭವಿಷ್ಯವನ್ನು ರೂಪಿಸಲು ಒಗ್ಗೂಡುವ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದೆ.
ದಿನವಿಡಿ ನಡೆಯುವ ಈ ಶೃಂಗಸಭೆಯಲ್ಲಿ ಖ್ಯಾತ ಉದ್ಯಮಿಗಳಿಂದ ಸ್ಪೂರ್ತಿದಾಯಕ ಗೋಷ್ಠಿಗಳು, ಚರ್ಚೆಗಳು, ಸ್ಟಾರ್ಟ್ಅಪ್ ಮತ್ತು ನವೋದ್ಯಮಿಗಳ ಪ್ರದರ್ಶನಗಳು, ನೆಟ್ವರ್ಕಿಂಗ್ ಅವಕಾಶಗಳು ಮತ್ತು ಮೆರಾಕಿಫೈನ AI-ಚಾಲಿತ ಸೃಜನಶೀಲ ವೇದಿಕೆಯ ವಿಶೇಷ ಅನುಭವ ವಿನಿಮಯ ನಡೆಯಲಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವವರು ಪ್ರಾಯೋಗಿಕ ಹೊಸ ತಂತ್ರಜ್ಞಾನ ಕುರಿತು ಆಳವಾದ ಜ್ಞಾನ ಪಡೆಯಲಿದ್ದಾರೆ. ಅಲ್ಲದೇ, ಹೊಸ ಅವಕಾಶಗಳನ್ನು ಕಂಡುಕೊಳ್ಳಲಿದ್ದಾರೆ. ಸೂಕ್ತ ಮಾರ್ಗದರ್ಶಕರೊಂದಿಗೆ ಸಂಪರ್ಕ ಹೊಂದಲು ಮತ್ತು ಸಂಭಾವ್ಯ ಸಹಯೋಗಗಳನ್ನು ಪಡೆಯಲು ಇದು ಒಂದು ಉತ್ತಮ ವೇದಿಕೆಯಾಗಿದೆ.
“ಒಂದು ಪರಿಸರ ವ್ಯವಸ್ಥೆ, ಅನಂತ ಸಾಧ್ಯತೆಗಳು” ಎಂಬ ದೃಷ್ಟಿಕೋನದೊಂದಿಗೆ, ಕ್ರಿಯೋಸ್ಫಿಯರ್ ಶೃಂಗಸಭೆಯು ವೈವಿಧ್ಯಮಯ ಪ್ರತಿಭೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಕರ್ನಾಟಕದಲ್ಲಿ ಬೆಳೆಯುತ್ತಿರುವ ನವೋದ್ಯಮ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಸೃಜನಶೀಲತೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಆಚರಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ವಿಷಯ ರಚನೆಕಾರರು, ಸಂಸ್ಥಾಪಕರು, ವೃತ್ತಿಪರರು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಭಾಗವಹಿಸಲಿದ್ದಾರೆ ಎಂದು ಮೆರಾಕಿಫಿ ಕಂಪನಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
