ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ಇಂಡಿ ಹಾಗೂ ಸಿಐಟಿಯು ಸಂಘಟನೆಯಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಿರುವುದು ಮತ್ತು ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ವಿಷಯವು ಪ್ರಸ್ತುತ ಪ್ರಮುಖ ಚರ್ಚೆಯಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ಇಂಡಿ ಹಾಗೂ ಸಿಐಟಿಯು ಸಂಘಟನೆಯ ಇಂಡಿ ಘಟಕ ಅಧ್ಯಕ್ಷೆ ಭಾರತಿ ವಾಲಿ ಅವರ ನೇತೃತ್ವದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ಕುಮಾರ್ ಪಿ, ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ವಾಲಿ ಅವರು ಅಂಗನವಾಡಿಗಳ ೩ ರಿಂದ ೬ ವರ್ಷದ ಮಕ್ಕಳು ನೇರವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವುದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಡಬಹುದು ಅಥವಾ ತಮ್ಮ ಉದ್ಯೋಗಕ್ಕೆ ಭಂಗ ಬರಬಹುದು ಎಂಬ ಭಯ ಭೀತಿಯಲ್ಲಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.
ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ನಡುವೆ ಸಮನ್ವಯ ಸಾಧಿಸಿ, ಎರಡೂ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಮಕ್ಕಳ ಪೌಷ್ಟಿಕತೆ ಮತ್ತು ಪ್ರಾಥಮಿಕ ಶಿಕ್ಷಣ ಎರಡಕ್ಕೂ ಧಕ್ಕೆಯಾಗದಂತೆ ನೋಡುವುದು ಅಗತ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೀರಿಜಾ ಸಕ್ರಿ, ರೇಖಾ ಕಬಾಡೆ, ಶಂಕ್ರೆಮ್ಮ ಪುಟಾಣಿ, ಸುನಂದಾ ಶಿವೂರ, ರೇಣುಕಾ ವನಂಜಿಕರ, ಬುದ್ದವ್ವ ಬ್ಯಾಕೊಡ, ಸಾವಿತ್ರಿ ಬಿರಾದಾರ, ಯಲ್ಲಮ್ಮ ಮಡ್ಡಿಮನಿ, ಸವಿತಾ ನಾಟಿಕಾರ, ಆರ್.ಎಲ್. ನಾಟಿಕಾರ, ಮಿನಾಕ್ಷೀ ಚವ್ಹಾಣ, ದಾನಮ್ಮ ಮಸೂತಿ, ರೇಣುಕಾ ಮ್ಯಾಗೇರಿ, ರೇಖಾ ಧೂಳೆ, ರೇಣುಕಾ ನಾರಾಯಣಪೂರ, ಕಲಾವತಿ ಮಲಗೊಂಡ, ಸುಜಾತಾ ತಿಕೋಟಾ, ಸಾವಿತ್ರಿ ಜೇವೂರ, ದೀಪಾ ಚಿಂಚೊಳ್ಳಿ, ಶೃತಿ ಮಂಗಳೂರ, ಸ್ವಾತಿ ಪಾಟೀಲ, ಎಲ್.ಎಂ. ಆಳೂರ, ಬಿ.ಎಂ. ಬೆಣ್ಣೆಸೂರ, ಕವಿತಾ ತೊರವಿ, ಅಲ್ಪಯಾ ಮುಜಾವರ, ಭಾಗಮ್ಮ ಕಟಕದೊಂಡ, ಸೌಂದರ್ಯ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

