ಜಿಲ್ಲಾ ಗಾಣಿಗ ಸಮಾಜದ ತುಳಸಿಗೇರಿ ಹಗೇದಾಳ ಆರೋಪ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶಾಸಕರ ಒತ್ತಡಕ್ಕೆ ಮಣಿದು ಅಧಿಕಾರ ವರ್ಗದವರು ಗಾಣಿಗ ಸಮಾಜಕ್ಕೆ ಅನ್ಯಾಯ ಮಾಡಿರುವದು ಮೇಲ್ಣೋಟಕ್ಕೆ ಕಂಡು ಬಂದಿದ್ದು ಗಾಣದೇವತೆ ವೃತ್ತವನ್ನು ಈ ಮೊದಲು ಯಾವ ಸ್ಥಳದಲ್ಲಿ ಇತ್ತೋ ಅದೇ ಸ್ಥಳದಲ್ಲಿ ಪುನರ್ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಶಾಸಕರ ವಿರುದ್ದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲು ಜಿಲ್ಲಾ ಗಾಣಿಗ ಸಮಾಜ ಕಟಿ ಬದ್ಧವಾಗಿದೆ ಎಂದು ತುಳಸಿಗೇರಿ ಟಿ ಹಗೇದಾಳ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ನಂದ್ಯಾಳ ಪಿ ಯು ಗ್ರಾಮದಲ್ಲಿ ಕಳೆದ ೧೫ ವರ್ಷಗಳಿಂದ ಇದ್ದ ಗಾಣಸಿರಿ ಸರ್ಕಲನ್ನು ಏಕಾಏಕಿ ಮಧ್ಯರಾತ್ರಿ ತೆರವುಗೊಳಿಸಿರುವದು ಗಾಣಿಗ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಭಾವಿಸಿ ಕೊಲ್ಹಾರ, ನಿಡಗುಂದಿ ಮತ್ತು ಬಸವನ ಬಾಗೆವಾಡಿ ತಾಲೂಕಿನ ಗಾಣಿಗ ಸಮಾಜ ಭಾಂಧವರು ಕಪ್ಪು ಬಟ್ಟೆಯನ್ನು ಧರಿಸಿ ಪಟ್ಟಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿಯನ್ನು ಸಲ್ಲಿಸಿದಾಗ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.
ಮುಖಂಡ ಹಣಮಂತ ಬೆಳ್ಳುಬ್ಬಿ ಮಾತನಾಡಿ ನಂದಿಹಾಳ ಪಿ.ಯು ಗ್ರಾಮದಲ್ಲಿ ಗಾಣದೇವತೆಯ ಸರ್ಕಲ್ ಮೂಲ ಯಾವಸ್ಥಳದಲ್ಲಿತ್ತೋ ಅದೇ ಸ್ಥಳದಲ್ಲಿ ಪುನಃ ನಿರ್ಮಸಲು ತಾಲೂಕಾ ಆಡಳಿತ ಸನ್ನದ್ದವಾಗಬೇಕು ಅಥವಾ ಕಟ್ಟಿಸಿಕೊಡುವ ಬಗ್ಗೆ ಸಮಾಜದ ಮುಂದೆ ಸ್ಪಷ್ಟ ಭರವಸೆಯನ್ನು ಕೊಟ್ಟು ಗಾಣಿಗ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯಾದ್ಯಾಂತ ಉಘ್ರವಾದ ಪ್ರತಿಭಟಣೆಯನ್ನು ಮಾಡಲು ಸಮಾಜ ಸಿದ್ದವಿದೆ ಎಂದು ಎಚ್ಚರಿಕೆಕೊಟ್ಟರು.
ಮುಖಂಡರಾದ ಸಗರೆಪ್ಪ ಮುರನಾಳ, ಕಲ್ಲಪ್ಪ ಸೊನ್ನದ, ಹಣಮಂತ ಗಿಡ್ಡಪ್ಪಗೋಳ, ರಾಮಣ್ಣ ಉಪ್ಪಲದಿನ್ನಿ, ಕುಮಾರಗೌಡ ಪಾಟೀಲ, ಬಿ.ಎಸ್. ಮನಗೂಳಿ, ನಿಂಗೊಂಡ ಸಣಬೆಂಕಿ, ಕಲ್ಮೇಶ ಪರಗೊಂಡ, ಸಿದ್ದು ದೇಸಾಯಿ, ರಮೇಶ ಮಮದಾಪೂರ ಬಸನಗೌಡ ಪಾಟೀಲ, ಜಗದೀಶ ಸುಣಗದ, ಶೇಖಪ್ಪ ಗಾಣಿಗೇರ, ರಮೇಶ ಬಸೆಟ್ಟಿ, ಬಳೂತಿ, ಹಂಗರಗಿ, ಬೆಳ್ಳುಬ್ಬಿ, ರೋಣಿಹಾಳ, ಗರಸಂಗಿ, ಹಣಮಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಮಾಜ ಬಾಂಧವರಿದ್ದರು.

