ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ
ನನ್ನ ಗಿಡ ನನ್ನ ಭೂಮಿ ಸಂಘಟನೆಯ ಸಹಯೋಗದಲ್ಲಿ
ವಿಜಯಪುರ ನಗರದ ಜಿಲ್ಲಾ ರೈಪಲ್ ಅಸೋಸಿಯೆಷನ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಪರಿಸರ ರಕ್ಷಣೆ ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು, ಪರಿಸರ ರಕ್ಷಣೆ ಎನ್ನುವುದು ಅನುದಿನದ ಕಾರ್ಯವಾಗಬೇಕು, ನನ್ನ ಗಿಡ ನನ್ನ ಭೂಮಿ ಸಂಘಟನೆ ನಿರಂತರವಾಗಿ ಪರಿಸರ ರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಪ್ರತಿಯೊಬ್ಬರಿಗೂ ಪರಿಸರ ರಕ್ಷಣೆ ಸ್ಪೂರ್ತಿ ದೊರಕಿಸುತ್ತಿದೆ ಎಂದರು.
ಸಸಿ ನೆಡುವುದು ಹಾಗೂ ಅದನ್ನು ಪೋಷಿಸುವುದು ಒಂದು ಅಪೂರ್ವ ಪರಿಸರ ರಕ್ಷಣಾ ಚಟುವಟಿಕೆ, ಶುಭ ಸಂದರ್ಭದಲ್ಲಿ ಸೇರಿದಂತೆ ವಿವಿಧ ಸಮಾರಂಭದಲ್ಲಿ ಸಸಿ ನೆಡುವ ಪರಂಪರೆ ಮೂಡಿಸಿಕೊಳ್ಳಬೇಕು ಎಂದರು.
ಬಸವರಾಜ ಬೈಚಬಾಳ, ಚಿದಾನಂದ ಔರಂಗಬಾದ, ಮಂಜುನಾಥ ಆಸಂಗಿ ಕೃಷ್ಣಾ ಗುನ್ನಾಳಕರ, ಬಸವರಾಜ ಯಾದವಾಡ ವಿನಾಯಕ ಕಾಳೆ, ವಿಜಯ ಬೋಸಲೇ, ಯಲ್ಲಪ್ಪ ಮಾಳಿ, ದ್ಯಾಮಣ್ಣ ಗೋಮಟೆ, ಕರಾಟೆ ಶಿಕ್ಷಕ ಪ್ರೇಮ ಮೊದಲಾದವರು ಪಾಲ್ಗೊಂಡಿದ್ದರು.

