ಚಡಚಣದ ನಿಶಾಂತ ಭಾರತ್ ಗ್ಯಾಸ್ ವಿತರಕರ ವಿರುದ್ಧ ಗ್ರಾಹಕರಿಂದ ದೂರು | ಸ್ಪಂದಿಸಿದ ಆಹಾರ ಇಲಾಖೆ ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ನಿಶಾಂತ್ ಭಾರತ್ ಗ್ಯಾಸ್ ವಿತರಕರ ವಿರುದ್ಧ ಗ್ರಾಹಕರಿಂದ ಪ್ರತಿ ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ಗೆ ₹29.50 ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಉಪ ನಿರ್ದೇಶಕರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ ವಿನಯಕುಮಾರ ಪಾಟೀಲ ಅವರಿಗೆ ಅಕ್ರಮ ನಡೆದಿದೆ ಮತ್ತು ನಡೆಯುತ್ತಿದೆ ಅನ್ನುವದಕ್ಕೆ ನೀಡಿರುವ ಫೋಟೊ ಹಾಗೂ ದಾಖಲಾತಿಗಳು ಮತ್ತು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಿರುವದರಿಂದ ತಕ್ಷಣವೆ ಕ್ರಮ ಕೈಗೊಂಡ ವಿನಯಕುಮಾರ ಪಾಟೀಲ.
ಉಪ ನಿರ್ದೇಶಕರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ ವಿನಯಕುಮಾರ ಪಾಟೀಲ ಅವರು ಚಡಚಣ ತಾಲೂಕಿನ ಆಹಾರ ನಿರೀಕ್ಷಕರಾದ ಶಿವಾನಂದ ಕೋಳಿ ಅವರಿಗೆ ತನಿಖೆ ನಡೆಸುವಂತೆ ತಿಳಿಸಿದ್ದರಿಂದ ಶುಕ್ರವಾರ ಪಟ್ಟಣದ ಸ್ಥಳಕ್ಕೆ ಭೇಟಿನೀಡಿ ನಿಶಾಂತ್ ಭಾರತ್ ಗ್ಯಾಸ್ ಮಾಲಿಕರಾದ ನಿಶಾಂತ ವಿತರಕರ ಕಾರ್ಯವೈಖರಿಯನ್ನು ಪರಿಶೀಲಿಸಿ ಎಚ್ಚರಿಕೆ ನೀಡಿದ್ದು ಗ್ರಾಹಕರಿಂದ ಹೆಚ್ಚುವರಿ ಹಣ ಪಡೆದರೆ ಹಾಗೂ ಅಧಿಕೃತ ದರದ ಮಾಹಿತಿಯ ಫಲಕ ಅಳವಡಿಸುವದು, ಪಡೆದ ಹಣದ ಪಾವತಿ ಕೊಟ್ಟ ಸಿಲಿಂಡರ್ ನಂಬರ್ ನಮೂದಿಸಿ ಕಡ್ಡಾಯವಾಗಿ ಗ್ರಾಹಕರಿಗೆ ನೀಡುವದು,ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡಬೇಕೆಂದು, ಸಾರ್ವಜನಿಕರು ತಮ್ಮ ಕುಂದು ಕೊರತೆ ಹಾಗೂ ದೂರುಗಳನ್ನು ನೀಡಲು ಅನುಕೂಲವಾಗುವಂತೆ ಆಹಾರ ಇಲಾಖೆ ಸಂಪರ್ಕಾಧಿಕಾರಿಗಳ ದೂರವಾಣಿ ಸಂಖ್ಯೆಯ ಫಲಕ ಅಳವಡಿಸುವಂತೆ ಒಂದು ವಾರದ ಗಡವು ನೀಡಿದರಲ್ಲದೆ, ಮತ್ತೆ ದೂರುಗಳು ಬಂದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.

