ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರದ ದೇವಸ್ಥಾನದಲ್ಲಿ ಸಡಗರದಿಂದ ಬುಧವಾರ ಹನುಮ ಜಯಂತಿ ಆಚರಿಸಲಾಯಿತು.
ಬೆಳಗ್ಗೆ ಉತ್ಸವ ಮೂರ್ತಿಯನ್ನು ನೂರಾರು ಭಕ್ತರು ಸಕಲ ವಾದ್ಯಗಳೊಂದಿಗೆ ಕೃಷ್ಣಾ ನದಿಗೆ ತೆರಳಿ ಗಂಗಾಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ತರಲಾಯಿತು. ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು.
ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ ಜರುಗಿತು.
ವಿಠ್ಠಲಾಚಾರ್ಯ ಗದ್ದನಕೇರಿ ತೊಟ್ಟಿಲು ಪೂಜೆ ಹಾಗೂ ಪವಮಾನ ಹೋಮ ನೆರವೇರಿಸಿದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿ ಅಧ್ಯಕ್ಷ ಶ್ಯಾಮ ಪಾತರದ, ಗೋಪಾಲ ಗದ್ದನಕೇರಿ, ಕೃಷ್ಣ ಕಟ್ಟಿ, ಪಾಂಡುರAಗಾಚಾರ್ಯ ಹೊಸೂರ, ಸಂತೋಷ ಪೂಜಾರ, ಯಲಗೂರದಪ್ಪ ಪೂಜಾರ, ಸಂಜೀವ ಪೂಜಾರ, ಆನಂದ ಪೂಜಾರ, ಎಸ್. ಐ.ಡೆಂಗಿ ಮತ್ತೀತರರು ಇದ್ದರು.
ಚೆನ್ನಿಗಾವಿ ಬಂಧುಗಳು ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದರು.
ಹನುಮ ಜಯಂತಿ ಅಂಗವಾಗಿ ೧೦೦೦ ಮಾವಿನ ಹಣ್ಣುಗಳಿಂದ ಹನುಮನಿಗೆ ಅಲಂಕಾರ ಮಾಡಲಾಗಿತ್ತು.

