ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳಲ್ಲಿ ಯಾವುದೇ ರೀತಿಯ ಭೇದಭಾವ ಸಲ್ಲದು. ಮಕ್ಕಳಿಗೆ ಅಡಿಪಾಯದ ಶಿಕ್ಷಣ ಬಹಳ ಮುಖ್ಯ ಎಂದು ಉತ್ತರ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ್ ಹೇಳಿದರು.
ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಮಂಗಳವಾರ ಅಂಗನವಾಡಿ ಮಕ್ಕಳ ಸಮ್ಮೇಳನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಬುಧವಾರ ಸ್ನೇಹಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ. ನಮ್ಮೆಲ್ಲರಿಗೂ ಮಕ್ಕಳೇ ದೇವರು ಮಕ್ಕಳಿಗಾಗಿ ಅವರ ಶಿಕ್ಷಣಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಸಮುದಾಯದ ಸಹಕಾರ ಹಾಗೂ ಗ್ರಾಮದ ಸರ್ವರೂ ಕೂಡ ನಿಮ್ಮ ಜೊತೆಗಿರುತ್ತಾರೆ ಎಂದರು.
ಸಾನಿಧ್ಯ ವಹಿಸಿದ ಮಂಜುನಾಥ ಹಿರೇಮಠ ಮಾತನಾಡಿ, ಪಾಲಕರು ಅಂಗನವಾಡಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ಒಳ್ಳೆಯ ಅಭಿಪ್ರಾಯ ಬೆಳೆಸಿಕೊಳ್ಳಬೇಕು. ಗ್ರಾಮದ ಶರಣಬಸು ಅಪ್ಪಾಸಾಹೇಬ ಬಸವರೆಡ್ಡಿ ಎಂಬುವರು ೨೦ ಲಕ್ಷ ರೂ. ಮೌಲ್ಯದ ಜಾಗವನ್ನು ಅಂಗನವಾಡಿ ಕಟ್ಟಡಕ್ಕೆ ಕೊಟ್ಟಿರುವುದು ಶ್ಲಾಘನೀಯ ಎಂದರು.
ಸ್ನೇಹ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ ಮಾತನಾಡಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮ್ಮ ಬಿರಾದಾರ, ಲಕ್ಷ್ಮೀಬಾಯಿ ಉಕ್ಕಲಿ, ಅನಸೂಬಾಯಿ ಬಿರಾದಾರ, ಶಾರದಾ ಕೊಳ್ಳಿ, ಕಲಾವತಿ ಹೊಲೆಯರ ಹಾಗೂ ಸಹಾಯಕಿಯರಾದ ಶಾಂತಾಬಾಯಿ ಹೊಕ್ಕುಂಡಿ, ಸವಿತಾ ಸರಬಡಗಿ, ಮಹಾದೇವಿ ಉಕ್ಕಲಿ, ಭಾಗ್ಯಶ್ರೀ ದಿಡ್ಡಿ, ಅಯ್ಯವ್ವ ಬೇವಿನಗಿಡದ, ಮತ್ತು ಹತ್ತನೆ ತರಗತಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮುಕಿನಾ ಪಾನ್ಪರೋಶ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಜಯಲಕ್ಷ್ಮಿ ಹೊಕ್ಕುಂಡಿಯವರನ್ನು ಸನ್ಮಾನಿಸಲಾಯಿತು.
ಹನುಮಂತರಾಯ ಬಿರಾದಾರ, ನಾಗಯ್ಯ ಹಿರೇಮಠ, ನಾಗಲಿಂಗ ಹೊಕ್ಕುಂಡಿ, ವೀರೇಶ ಲಚ್ಯಾಣ, ರಾಮನಗೌಡ ಬಮ್ಮನಳ್ಳಿ, ಶಿವನಗೌಡ ಬಮ್ಮನಳ್ಳಿ, ಸಿದ್ದಮ್ಮ ನಡಕೂರ, ಇಮಾಮಸಾಬ್ ಶಹಾಬಾದ ಸ್ನೇಹಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಶೈ¯ ಜೋಗುರ, ಭೀಮಾಬಾಯಿ ಹೆರೂರ ಅಶ್ವಿನಿ ಉಪ್ಪಾರ ಹಾಗೂ ಮಕ್ಕಳು ಇದ್ದರು.

