ಕೊಲ್ಹಾರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಭಾರತೀಯ ಜನತಾ ಪಕ್ಷ ಸಾಮಾಜಿಕ ಕ್ಷೇತ್ರದಲ್ಲಿ ರಾಜಕೀಯ ಗುರುತಿಸಿಕೊಳ್ಳಬೇಕು ಎನ್ನುವ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಹೊಂದಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಾಜ ಸೇವೆ ಮಾಡುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ನಾಗರಿಕ ಪ್ರಜ್ಞೆಯನ್ನು ಮೂಡಿಸಿ ಉತ್ತಮ ಸಂಸ್ಕಾರದೊಂದಿಗೆ ಸಂಘಟಣೆಯಲ್ಲಿ ತೊಡಗಿಕೊಳ್ಳಲು ಮುನ್ನುಗ್ಗುವ ಕಾರ್ಯಕರ್ತರಿಗಾಗಿ ಪ್ರ.ಶಿಕ್ಷಣದಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಯಲ್ಲಮ್ಮದೇವಿ ಸಿಬಿಎಸ್ಸಿ ಶಾಲಾ ಆವರಣದಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಮಂಡಲ ಬಿಜೆಪಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿರುವ ಪಂಡೀತ ದೀನದಯಾಳ ಉಪಾದ್ಯಾಯ ಪ್ರ.ಶಿಕ್ಷಣ ಮಹಾ ಅಭಿಯಾನ ಸಮಾರಂಭ ಮತ್ತು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಾವೀರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಇಂದಿನ ಯುವ ಸಮೂಹದ ನಾಯಕರು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಅಧ್ಯಯನ ಮಾಡಿ ಸಮಾಜಮುಖಿ ಕಾರ್ಯಗಳನ್ನು ಹೇಗೆ ಮಾಡಬೇಕು ಸಂಘಟಣೆಯ ದೃಷ್ಟಿಕೋನ ಹೇಗಿರಬೇಕು ಜನರೊಂದಿಗೆ ಸಂಪರ್ಕ ಮಾಡುವಾಗ ನಮ್ಮಗಳ ಮಾತಿನ ಶೈಲಿ ವರ್ತನೆ ನಡೆದುಕೊಳ್ಳುವ ರೀತಿಯ ಅಧ್ಯಯನವನ್ನು ಕಲಿಸಿಕೊಡಲು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಗಟ್ಟಿಯಾಗಿಸಲು ಪಕ್ಷವು ಸದಾವಕಾಲ ಇಂಥಹ ಕ್ರಿಯಾಶೀಲ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವದನ್ನು ತೋರಿಸುವದೇ ಬಿಜೆಪಿ ಪಕ್ಷದ ಉದ್ದೇಶವಾಗಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಜನಸಂಘವನ್ನು ಸ್ಥಾಪಣೆ ಮಾಡಿ ರಾಜಕೀಯವಾಗಿ ಗುರುತಿಸಿಕೊಂಡ ಹಿರಿಯರ ತಪಸ್ಸಿನ ಫಲವಾಗಿ ದೀಪದ ಗುರುತಿನಿಂದ ಕಮಲದ ಗುರುತಿನೊಂದಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕ್ರಿಯಾಶೀಲ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಿರುವ ಆ ಮಹಣೀಯರ ತ್ಯಾಗದ ಪ್ರತಿರೂಪವಾಗಿರುವ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ದೇಶಕ್ಕಾಗಿ ರಾಜ್ಯದ ಹಿತಕ್ಕಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಊರಿನ ಭೂತ್ ಮಟ್ಟದಿಂದ ವಾರ್ಡಗಳಲ್ಲಿ ತಮ್ಮದೇ ಆದ ಸಾರ್ವಜನಿಕ ಸೇವೆ ಮಾಡಿ ಬೆಳೆಯಲು ಪಕ್ಷವು ತಮ್ಮೊಂದಿಗೆ ಸಹಕಾರ ಕೊಡುತ್ತದೆ ಎಂದರು.
ವಿಶ್ವಮಟ್ಟದಲ್ಲಿ ಮಧ್ಯಪ್ರಾಚ್ಯದ ಪ್ರಾಂತಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಭರತ ಖಂಡದಲ್ಲಿ ನಾವುಗಳು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುವದನ್ನು ಗಮನಿಸಿದಾಗ ಬಿಜೆಪಿ ಪಕ್ಷವು ರಾಷ್ಟ್ರಕ್ಕೆ ಒಬ್ಬ ದಿಟ್ಟ ನಾಯಕ ನರೇಂದ್ರ ಮೋದಿಯವರನ್ನು ಕೊಟ್ಟಿರುವದು ಸಾರ್ಥಕವೆಣಿಸುತ್ತದೆ ಅಂತಹ ನಾಯಕರ ಮುಂದಾಳತ್ವದಲ್ಲಿ ನಾವು ನೀವುಗಳು ಮತ್ತಷ್ಟು ಕ್ರಿಯಾಶೀಲರಾಗಿ ಪಕ್ಷದ ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸುವ ಸಲುವಾಗಿಯೇ ಏರ್ಪಡಿಸಿರುವ ಕಾರ್ಯಕರ್ತರ ಪ್ರ.ಶಿಕ್ಷಣ ಅಭಿಯಾನದ ಸದುಪಯೋಗವನ್ನು ಯುವಕ ಯುವತಿಯರು ಪಡೆದುಕೊಳ್ಳಬೇಕು ಎಂದರು.
ಈ ಸಂಧರ್ಬದಲ್ಲಿ ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಚಂಧ್ರಶೇಖರ ಕವಟಗಿ, ಮಲ್ಲಿಕಾರ್ಜುನ ದೇವರಮನಿ, ಶ್ರೀಧರ ಬಿಜ್ಜರಗಿ, ಡಾ|| ಸಂಗಮೇಶ ಗೂಗ್ಯಾಳ, ಚಿದಾನಂದ ಚಲವಾದಿ, ವಿಜಯ ಪೂಜಾರಿ, ಪಟ್ಟಣ ಪಂಚಾಯತ ಸದಸ್ಯರಾದ ಶ್ರೀಶೈಲ ಅಥಣಿ, ಬಾಬು ಭಜಂತ್ರಿ, ಕಲ್ಲಪ್ಪ ಸೊನ್ನದ, ಪದ್ಮಾವತಿ ಗುಡಿ, ಶಾಂತಾಬಾಯಿ ಬೀಳಗಿ, ಪರವೀನಬಾನು ಟಕ್ಕಳಕಿ, ಜಗದೀಶ ಸುಣಗದ, ಸಗರೆಪ್ಪ ಮುರಣಾಳ, ಆಶೋಕ ಬಾಗೇವಾಡಿ ಅನೇಕರು ಉಪಸ್ಥಿತರಿದ್ದರು.

