ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಹಿಳೆಯರು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿ ಜೀವನ ಸಾಗಿಸಬೇಕು. ಮಹಿಳೆ ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಎಂದು ಸಮಾಜ ಸೇವಕಿ, ಶಿಕ್ಷಣ ಪ್ರೇಮಿ ನಾಗರತ್ನ ಅಶೋಕ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂದಗಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಸಾಧನೆಗೈದಿದ್ದಾರೆ. ವಿದ್ಯಾವಂತ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಮಹಿಳೆಯರನ್ನು ಪೂಜ್ಯನೀಯ ಭಾವದಿಂದ ಭಾರತ ಕಾಣುತ್ತದೆ ಎಂದರು.
ಈ ವೇಳೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ಮಹಿಳೆಯರು ಇಂದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತನ್ನುನ್ನು ತಾವು ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ನೀಡುವುದರ ಮೂಲಕ ಮಹಿಳೆಯರನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡುಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲಮೇಲ ಮಹಿಳಾ ಸಾಹಿತಿ ರೇವತಿ ಉಪ್ಪಿನ ವಹಿಸಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಯ್.ಸಿ.ಮಯೂರ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಭೌರಮ್ಮ ಮಾನವಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಶಿಕ್ಷಕಿ ಶೋಭಾ ಚಿಗರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಾದ ಮಹಾದೇವಿ ಅಗಸರ. ಲಕ್ಷ್ಮಿಬಾಯಿ ಕುಂಬಾರ. ರೇಣುಕಾ ಚೌರ, ದಾನಮ್ಮ ಕುಂಬಾರ, ಪ್ರೇಮಾ ನಾಯಕ, ನಾಗಮ್ಮ ಎಮ್ಮಿ, ಶೈಲಾ ನ್ಯಾಮಣ್ಣವರ, ಮಹಾದೇವಿ ಹಿರೇಮಠ, ಇಮಾಂಬಿ ಬೋರಗಿ, ಮೀನಾಕ್ಷಿ ವಾಘಮೋರೆ, ಬೌರಮ್ಮ ಮಾನವಿ, ದಾನಮ್ಮ ಬಿರಾದಾರ. ಸುಚಿತ್ರಾ ಆಕಾಶ. ಶಾಂತಾಬಾಯಿ ಗುಬ್ಬೇವಾಡ ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶೈಲಾ ಸ್ಥಾವರಮಠ, ಅನಸೂಯ ಪಾರಗೊಂಡ, ವರ್ಷಾ ಪಾಟೀಲ, ಜಗದೇವಿ ಬಿರಾದಾರ, ಜಯಶ್ರೀ ಕುಲಕರ್ಣಿ, ಶಶಿಕಲಾ ಅಂಗಡಿ, ಶಾರದಾ ಬೇಟಗೇರಿ, ಪ್ರತಿಭಾ ಚೆಳ್ಳಗಿ, ಜಯಶ್ರೀ ಹದನೂರ, ಶರಣಮ್ಮ ನಾಯಕ, ಶಾಂಭವಿ ಬೋರಗಿ, ಜಯಶ್ರೀ ನಾಟೀಕಾರ, ಶಾಂತು ರಾಣಾಗೋಳ. ಪುರುಷೋತ್ತಮ ಕುಲಕರ್ಣಿ, ವಿಶ್ವನಾಥ ಪಾಟೀಲ, ಇಸ್ಲಾಯಿಲ್ ಶೇಖ, ಜೈಭೀಮ ತಳಕೇರಿ, ರಾಮಕೃಷ್ಣ ಹೆಬ್ಬಾಳ, ಎಸ್.ಎಸ್.ಸಾತಿಹಾಳ ಸೇರಿದಂತೆ ಅನೇಕರು ಇದ್ದರು. ಶಶಿಕಲಾ ನಾಯ್ಕೋಡಿ ಮಹಿಳೆಯರ ಕುರಿತು ಗೀತಗಾಯನ ಮಾಡಿದರು. ಡಾ ಪ್ರಕಾಶ ರಾಗ ರಂಜನಿ ನಾಡಿಗೀತೆ ಪ್ರಸ್ತುತಗೊಳಿಸಿದರು. ಶಿಕ್ಷಕಿ ಸೈನಾಬಿ ಮಸಳಿ ಪ್ರಾರ್ಥಿಸಿದರು. ಲಕ್ಷ್ಮಿ ಪಾಟೀಲ ಸ್ವಾಗತಿಸಿದರು. ಕಸಾಪ ತಾಲೂಕ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ನಿರೂಪಿಸಿದರು. ಸುನಂದಾ ವಂದಿಸಿದರು.

