ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಾಮ ನವಮಿ ನಿಮಿತ್ತ ಶ್ರೀರಾಮನ ಮೂರ್ತಿ ಮೆರವಣಿಗೆ ಪಟ್ಟಣದ ದೇವಿಗುಡಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣ ಪಂಚಾಯತ ಆವರಣದವರೆಗೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಸಾಮಾಜಿಕ ಸಮರಸತ ಪ್ರಮುಖರಾದ ಶ್ರೀಮಂತ ದುದ್ದಗಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.
ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಹಣಮಂತ ರಜಪೂತ ಮಾತನಾಡಿ, ಈಗಿನ ಯುವಪಿಳಿಗೆಗಳಾದ ನಾವುಗಳು ರಾಮನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ಹಿಂದೂ ಆಚರಣೆಗಳನ್ನು ರೂಡಿಸಿಕೊಳ್ಳಬೇಕು. ನಮ್ಮ ಹಿಂದೂ ಧರ್ಮ ರಕ್ಷಣೆಗೆ ನಾವೆಲ್ಲರೂ ಸಿದ್ದರಿರಬೇಕು ಎಂದರು.
ಮುಖಂಡ ಕಮಲಾಕರ ಪತ್ತಾರ ಮಾತನಾಡಿ, ಹಿಂದೂ ಹುಡುಗಿಯರು ಮತಾಂತರ ವಾಗುವುದನ್ನು ತಡೆಗಟ್ಟಬೇಕಿದೆ. ಗೋವು ರಕ್ಷಣೆ ದೇಶರಕ್ಷಣೆ ಧರ್ಮ ರಕ್ಷಣೆ ಪ್ರತಿಯೊಬ್ಬ ಭಾರತೀಯ ಹಿಂದೂವಿನ ಕರ್ತವ್ಯವಾಗಿದೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ವಿಜಯಪುರ ಶಾಸಕರ ಬಸವನಗೌಡ ಪಾಟೀಲ(ಯತ್ನಾಳ) ಭಾವಚಿತ್ರಗಳು ರಾರಾಜಿಸುತ್ತಿದ್ದವು. ಯುವಕರ ಬಾಯಿಯಲ್ಲಿ ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ ಎಂದು ಕೂಗುತ್ತಿದ್ದರು. ಬಿಜೆಪಿ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಪ್ರಮುಖ ಕಾರ್ಯಕರ್ತರು ರಾಮನವಮಿಯಲ್ಲಿ ಭಾಗವಹಿಸಲಿಲ್ಲ.
ಮೆರವಣಿಗೆಯಲ್ಲಿ ಹಿಂದೂ ಮುಖಂಡ ಮಲ್ಲಿಕಾರ್ಜುನ ಅನಂತಗೋಳ, ಶಿವಾನಂದ್ ಮಾರ್ಸನಹಳ್ಳಿ, ರಾಜೇಂದ್ರ ರಾಠೋಡ, ಹೊನ್ನಪ್ಪ ಗುರುಕಾರ, ಬಾಬು ಬಿಜ್ಜರಗಿ, ಸಿದ್ದು ಹವಳಗಿ, ರತನ ಒಣಕುದರಿ, ನಿಂಗರಾಜ ಬಂಟನೂರ, ಶಿವಾನಂದ ರಾಯಚೂರ, ಬಂಡಯ್ಯ ಸ್ಥಾವರಮಠ, ರಾಹುಲ್ ಬಗಲಿ, ಅಶ್ವತ್ ಪತ್ತಾರ್, ರಾಹುಲ್ ರಜಪೂತ ಇತರರು ಇದ್ದರು.

