Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರ ಮನವಿ

ಸರ್ಕಾರದ ನಿರ್ದೇಶನದಂತೆ ನಡೆಯದ ಜಲಧಾರೆ ಕಾಮಗಾರಿ

ಆಲಮಟ್ಟಿಡ್ಯಾಂಸೈಟ್ ಪ್ರದೇಶದಲ್ಲಿ ಒಣಗುತ್ತಿರುವ ಬೇವಿನ ಮರಗಳು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಮರ್ಥವಾಗಿರುವ ಹಾಲಿ ಫೆನಲ್ ಗೆಲ್ಲಿಸಿ :ಸಚಿವ ಶಿವಾನಂದ
(ರಾಜ್ಯ ) ಜಿಲ್ಲೆ

ಸಮರ್ಥವಾಗಿರುವ ಹಾಲಿ ಫೆನಲ್ ಗೆಲ್ಲಿಸಿ :ಸಚಿವ ಶಿವಾನಂದ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಸಮಾಲೋಚನಾ ಸಭೆ

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಶತಮಾನದ ಇತಿಹಾಸ ಹೊಂದಿರುವ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಶೇರುದಾರರು, ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಫೆನಲ್ ಆಯ್ಕೆ ಮಾಡುವಂತೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.
ಪಟ್ಟಣದ ಬಸವ ಭವನದಲ್ಲಿ ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆ ಆಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದಿರುವ ಹಾಲಿ ಆಡಳಿತ ಮಂಡಳಿ ತಂಡವನ್ನೇ ಆಯ್ಕೆ ಮಾಡುವಂತೆ ಕೋರಿದರು.
ಲಾಭದಲ್ಲಿರುವ ಸದರಿ ಬ್ಯಾಂಕಿಗೆ ಚುನಾವಣೆ ವೆಚ್ಚ ತಪ್ಪಿಸಲು ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ದುರ್ದೈವದಿಂದ ಚುನಾವಣೆ ಎದುರಾಗಿದೆ. ಹೀಗಾಗಿ ಹಾಲಿ ಫೆನಲ್ ಗೆಲ್ಲಿಸುವ ಮೂಲಕ ಸಹಕಾರಿ ರಂಗದ ಸಿದ್ದೇಶ್ವರ ಬ್ಯಾಂಕ್ ಹಿರಿಮೆ ಹೆಚ್ಚಿಸಿ ಎಂದು ಮನವಿ ಮಾಡಿದರು.
ಡಾ.ಫ.ಗು. ಹಳಕಟ್ಟಿ ಅವರಂತಹ ಮಹನೀಯರ ದೂರದೃಷ್ಟಿಯಿಂದ ಸ್ಥಾಪನೆಯಾಗಿರುವ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಒಂದು ಕಾಲದಲ್ಲಿ ಅತ್ಯಂತ ಉತ್ತುಂಗದಲ್ಲಿತ್ತು. ಆದರೆ ಮಧ್ಯದಲ್ಲಿ ಆಡಳಿತ ವೈಫಲ್ಯದಿಂದಾಗಿ ಹಾನಿಗೆ ಈಡಾಗಿತ್ತು. ಆದರೆ ಹಾಲಿ ಆಡಳಿತ ಮಂಡಳಿ ಕಳೆದ ಮೂರು ಅವಧಿಗೆ ಸಮರ್ಥ ಆಡಳಿತದಿಂದ ಹಾನಿಯಿಂದ ಮುಕ್ತವಾಗಿ ಲಾಭದಲ್ಲಿ ಸಾಗುತ್ತಿದ್ದು, ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲು ಹಾಲಿ ತಂಡವನ್ನೇ ಆಯ್ಕೆ ಮಾಡಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಹಕಾರಿ ರಂಗದ ಪ್ರಮುಖರಾದ ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಿ.ಎಸ್‌. ಪಾಟೀಲ ಯಾಳಗಿ, ಐ.ಸಿ.ಪಟ್ಟಣಶೆಟ್ಟಿ, ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ, ಅನಿಲ ದುಂಬಾಳೆ, ಸತೀಶ ಓಸ್ತವಾಲ, ಸುರೇಶ ಹಾರಿವಾಳ, ತಾನಾಜಿ ನಾಗರಾಳ, ಪ್ರೇಮು ಮ್ಯಾಗೇರಿ, ಬಾಲಚಂದ್ರ ಮುಂಜಾನೆ, ಅಣ್ಣುಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಲಿ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಸ್ಪರ್ಧಾಕಣದಲ್ಲಿರುವ ವಿಜಯಕುಮಾರ ಇಜೇರಿ, ಐ.ಎಂ.ಪಟ್ಟಣಶೆಟ್ಟಿ, ವೈಜನಾಥ ಕರ್ಪೂರಮಠ, ಹರ್ಷಗೌಡ ಪಾಟೀಲ, ಡಾ.ಸಂಜೀವ ಪಾಟೀಲ ಮುಳವಾಡ, ಗುರು ಗಚ್ಚಿನಮಠ, ಬೋರಮ್ಮ ಗೊಬ್ಬೂರ, ಸೌಭಾಗ್ಯ ಭೋಗಶೆಟ್ಟಿ, ಕರುಣಾ ಅವರಂಗಾಬಾದ್, ಸುರೇಶ ಗಚ್ಚಿನಕಟ್ಟಿ, ರಮೇಶ ಬಿದನೂರು, ಪ್ರಕಾಶ ಬಗಲಿ, ಗುರುರಾಜ ಗಂಗನಹಳ್ಳಿ, ರಾಜು ಕತ್ತಿ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ಸಾಯಬಣ್ಣ ಭೋವಿ, ಅಮೋಘಸಿದ್ಧ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.
ರವಿ ರಾಠೋಡ ಸ್ವಾಗತಿಸಿದರು. ಸಂಗಮೇಶ ಓಲೇಕಾರ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರ ಮನವಿ

ಸರ್ಕಾರದ ನಿರ್ದೇಶನದಂತೆ ನಡೆಯದ ಜಲಧಾರೆ ಕಾಮಗಾರಿ

ಆಲಮಟ್ಟಿಡ್ಯಾಂಸೈಟ್ ಪ್ರದೇಶದಲ್ಲಿ ಒಣಗುತ್ತಿರುವ ಬೇವಿನ ಮರಗಳು

ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಮನಗೂಳಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರ ಮನವಿ
    In (ರಾಜ್ಯ ) ಜಿಲ್ಲೆ
  • ಸರ್ಕಾರದ ನಿರ್ದೇಶನದಂತೆ ನಡೆಯದ ಜಲಧಾರೆ ಕಾಮಗಾರಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಡ್ಯಾಂಸೈಟ್ ಪ್ರದೇಶದಲ್ಲಿ ಒಣಗುತ್ತಿರುವ ಬೇವಿನ ಮರಗಳು
    In (ರಾಜ್ಯ ) ಜಿಲ್ಲೆ
  • ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಆರ್‌ಎಂಎಸ್‌ಎ ಶಾಲೆಗೆ ಶಿಕ್ಷಕರ ಕೊರತೆ :ಧರಣಿ ಸತ್ಯಾಗ್ರಹ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಸರ್ಕಾರದಿಂದ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ
    In (ರಾಜ್ಯ ) ಜಿಲ್ಲೆ
  • ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟ್ರ್ಯಾಕ್ಟರ್ ರ‍್ಯಾಲಿ
    In (ರಾಜ್ಯ ) ಜಿಲ್ಲೆ
  • ಉತ್ತಮ ಸಂವಹನ ಕಲೆಯೇ ಯಶಸ್ಸಿನ ಮೆಟ್ಟಿಲು :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಡಾ.ಯಲಿಗಾರ :ಎಸ್ಪಿ ನಿಂಬರಗಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಜಾಗೆ ಒತ್ತುವರಿ ತೆರವಿಗೆ ಪ.ಪಂ. ಸದಸ್ಯರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.