Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಸವನ ಬಾಗೇವಾಡಿಯಲ್ಲಿ ಆರ್.ಎಸ್.ಎಸ್. ಭವ್ಯ ಪಥಸಂಚಲನ

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡುವ ಆರೆಸ್ಸೆಸ್

ರಂಗಕರ್ಮಿ ರಾಜು ತಾಳಿಕೋಟೆ ಇನ್ನು ನೆನಪು ಮಾತ್ರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಋತುಚಕ್ರ ಹರಿವನ್ನು ಅಪ್ಪಿಕೊಂಡು ಶಕ್ತಿಯನ್ನು ಆಚರಿಸೋಣ
ವಿಶೇಷ ಲೇಖನ

ಋತುಚಕ್ರ ಹರಿವನ್ನು ಅಪ್ಪಿಕೊಂಡು ಶಕ್ತಿಯನ್ನು ಆಚರಿಸೋಣ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಮನ್ ಪಾಟೀಲ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವೂ ಮಹಿಳಾ ಉದ್ಯೋಗಿಗಳ ಯೋಗ ಕ್ಷೇಮದ ಹಿತದೃಷ್ಟಿ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಹಿತ ನಿಟ್ಟಿನಲ್ಲಿ
“ಮುಟ್ಟಿನ ರಜೆ ನೀತಿ 2025 ” ಒಂದು ದಿನ ವೇತನ ಸಹಿತ ರಜೆ ನೀಡುವ ನೀತಿಗೆ ಅನುಮೋದನೆ ನೀಡಿರುವುದು ಮಹತ್ವದ ಹೆಜ್ಜೆ


ಕೇರಳ, ಸಿಕ್ಕಿಂ, ಬಿಹಾರ, ಒಡಿಶಾ ರಾಜ್ಯಗಳು ಈ ಹಿಂದೆಯೇ ಋತುಚಕ್ರ ರಜೆ ನೀತಿ ಯನ್ನು ಅಳವಡಿಸಿವೆ. ಈಗ ಕರ್ನಾಟಕ ಸರ್ಕಾರ ವೂ ಕೂಡ ಇದಕ್ಕೆ ಮುಂದಾಗಿರುವುದು ಒಳ್ಳೆಯ ನಡೆ. ಋತುಚಕ್ರ ಎಂಬುದು ಹೆಣ್ಣಿನ ದೇಹದಲ್ಲಿ ನಡೆಯುವ ಅತ್ಯಂತ ಸಹಜ ಕ್ರಿಯೆ. ಪಿರಿಯಡ್ಸ ಅಥವಾ ಮುಟ್ಟು ಇದೊಂದು ನೈಸರ್ಗಿಕ ವಿದ್ಯಮಾನವಾದರೂ ಇದು ಬರುವ ಒಂದು ವಾರ 15 ದಿನಗಳ ಮುಂಚೆ ಆಕೆಯ ಮನಸ್ಥಿತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಇದು ಪ್ರಾರಂಭವಾದ ಮೊದಲ 3,4 ದಿನಗಳು ಮಹಿಳೆಯರು ತುಂಬ ನೋವನ್ನು ಅನುಭವಿಸುತ್ತಾರೆ.
ಆ ದಿನಗಳಲ್ಲಿ ಹಾರ್ಮೋನಗಳ ಬದಲಾವಣೆಯಿಂದಾಗಿ ಅವರಲ್ಲಿ ತಲೆನೋವು, ಸುಸ್ತು , ಹೊಟ್ಟೆನೋವು, ಕಾಲುಗಳ ಸೆಳೆತ , ಕಿರಿಕಿರಿಗಳು, ಪದೇ ಪದೇ ಮೂಡ್ ಸ್ವಿಂಗ್ಸ್, ಸತತ 5 ದಿನಗಳ ರಕ್ತಸ್ರಾವ ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಈ ಸಮಯದಲ್ಲಿ ಒಬ್ಬೊಬರಿಗೆ ಒಂದು ರೀತಿಯ ನೋವಿರುತ್ತದೆ .
ಲಂಡನ್ ಪೇನ್ ಜರ್ನಲ್ನಲ್ಲಿ ಪ್ರಕಟಿಸಿದ ಒಂದು ವೈದ್ಯಕೀಯ ಅಧ್ಯಯನದ ಪ್ರಕಾರ ಋತುಚಕ್ರದ ನೋವು ಹೃದಯಾಘಾತದಷ್ಟೇ ಕೆಟ್ಟದಾಗಿರುತ್ತದೆ ಎಂದು ತಿಳಿದು ಬಂದಿದೆ. 21 ನೆಯ ಶತಮಾನದ ಏಐ ಯುಗದಲ್ಲಿ ಬದುಕುತ್ತಿರುವಾಗ ಜಮ್ಮು ಕಾಶ್ಮೀರದ ಕೆಲವು ಹಳ್ಳಿಗಳಲ್ಲಿ ಮೆನ್ಸ್ಟ್ರುಲ್ ಸೈಕಲ್ ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ. ಆ ಪ್ರದೇಶಗಳ ಕುಟುಂಬದಲ್ಲಿ ಇದರ ಹೆಸರನ್ನು ಯಾರೂ ಎತ್ತುವುದಿಲ್ಲ. ಅಷ್ಟು ಗುಟ್ಟಾಗಿ ಇದು ಉಳಿದಿದೆ. ಹಾಗೆ ಇಲ್ಲಿ ಪೀರಿಯಡ್ ಅನ್ನು 5 ದಿನದ ರೋಗ ಅಂತ ಕರೆಯುತ್ತಾರೆ. ಅಷ್ಟೇ ಯಾಕೆ
ಪೀರಿಯಡ್ ನ ಅತಿಯಾದ ನೋವು ತಾಳಲಾರದೆ ಮುಂಬೈನ ಮಾಲ್ವಾನಿ ಪ್ರದೇಶದ 14 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ತಮಿಳು ನಾಡಿನ ತಿರುಚಿಯ 18 ವರ್ಷದ ಹುಡುಗಿಯೊಬ್ಬಳು ಮುಟ್ಟಿನ ಅತಿಯಾದ ನೋವನ್ನು ತಾಳಲಾರದೆ ನೋವು ಕಡಿಮೆ ಮಾಡಲು ಪೇನ್ ಕಿಲ್ಲರ್ಗಳ ಅತಿಯಾದ ಸೇವನೆಯಿಂದ ಸಾವಿಗೀಡಾಗಿದ್ದಾಳೆ. ಈಗ ಹೇಳಿ ಇದು ಕೇವಲ ಪೀರಿಯಡ್ ಮಾತ್ರವಾ.
ಹಿಂದೊಮ್ಮೆ ಸ್ಮೃತಿ ಇರಾನಿ ಪೀರಿಯಡ್ಸ್ ಎಂಬುದು ಅಂಗವೈಕಲ್ಯವಲ್ಲ ಇದಕ್ಕೆ ರಜೆ ಅಗತ್ಯವಿಲ್ಲ ಎಂದು ಹೇಳಿ ಟೀಕೆಗೊಳಗಾಗಿದ್ದರು.
ಇದೇನು ದೊಡ್ಡ ವಿಷಯವೇ ದೊಡ್ಡ ರೋಗ ಬಂದವರ ಹಾಗೆ ಆಡುತ್ತೀರಾ ಅಂತ ಹೇಳುವವರಿಗೆ
ಹೇಳುವುದು ಇಷ್ಟೇ ಆ ದಿನಗಳಲ್ಲಿ ಆಕೆ ಅನುಭವಿಸುವ ನೋವು ಅವಳಿಗೆ ಮಾತ್ರ ಗೊತ್ತು. ಎಷ್ಟೋ ಜನ ಈ ನೋವನ್ನು ಸಹಿಸಲಾರದೆ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ ಹಾಗೆ ಆಗಿ ಕತ್ತರಿಸಿ ಬಿಡುವಷ್ಟು ಯಾತನೆಗೆ ಒಳಗಾಗುತ್ತಾರೆ.
ಈಗ ಕರ್ನಾಟಕ ಸರ್ಕಾರ ನೀಡಿರುವ ಋತುಚಕ್ರ ರಜೆ ನೀತಿ ಯಿಂದ ಅದೆಷ್ಟೋ ಹೆಣ್ಮನಗಳಿಗೆ ನಿರಾಳವಾಗಿರುವುದಂತೂ ಸತ್ಯ. ಏಕೆಂದರೆ ಶಾಲಾ ಕಾಲೇಜುಗಳು ಗಾರ್ಮೆಂಟ್ಸ್ನಂತಹ ಜಾಸ್ತಿ ಹೊತ್ತು ನಿಂತು ಕೆಲಸ ಮಾಡುವ ಸ್ಥಳಗಳಲ್ಲಿ ಆ ದಿನಗಳಲ್ಲಿ ಮಹಿಳೆಯರು ಬಹಳ ಆಯಾಸಗೊಳ್ಳುತ್ತಾರೆ. ಈ ರಜೆ ನಿಯಮವನ್ನು ಆಯಾ ವಲಯಗಳು ಕಟ್ಟು ನಿಟ್ಟಾಗಿ ಪಾಲಿಸಿ ಮಹಿಳೆಯರೂ ಅಳವಡಿಸಿಕೊಂಡು ತಮ್ಮ ತಿಂಗಳ ದಿನಗಳನ್ನು ನಿರಾಳವಾಗಿ ಕಳೆಯುವಂತಾಗಲಿ. ಅವಳ ಪೂರ್ತಿ ನೋವನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದರೂ ಆ ದಿನಗಳಲ್ಲೂ ಕೆಲಸಕ್ಕೆ ಹೋಗಬೇಕಲ್ಲ ಎಂಬ ಆಲೋಚನೆ ದೂರ ಸರಿದು ಮುಟ್ಟಿನ ರಜೆ ಅವಳ ಮೊಗದಲ್ಲಿ ನಗು ಅವಳ ನೋವಿಗೆ ಕಿರು ಆಸರೆಯಾಗಲಿ ಹ್ಯಾಪಿ ಪಿರಿಯಡ್ಸ್..

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಸವನ ಬಾಗೇವಾಡಿಯಲ್ಲಿ ಆರ್.ಎಸ್.ಎಸ್. ಭವ್ಯ ಪಥಸಂಚಲನ

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡುವ ಆರೆಸ್ಸೆಸ್

ರಂಗಕರ್ಮಿ ರಾಜು ತಾಳಿಕೋಟೆ ಇನ್ನು ನೆನಪು ಮಾತ್ರ

ರೈತರಿಗೆ ಕೂಡಲೇ ಪರಿಹಾರ ನೀಡಿ :ಸಂಗಮೇಶ ಸಗರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಸವನ ಬಾಗೇವಾಡಿಯಲ್ಲಿ ಆರ್.ಎಸ್.ಎಸ್. ಭವ್ಯ ಪಥಸಂಚಲನ
    In (ರಾಜ್ಯ ) ಜಿಲ್ಲೆ
  • ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡುವ ಆರೆಸ್ಸೆಸ್
    In (ರಾಜ್ಯ ) ಜಿಲ್ಲೆ
  • ರಂಗಕರ್ಮಿ ರಾಜು ತಾಳಿಕೋಟೆ ಇನ್ನು ನೆನಪು ಮಾತ್ರ
    In (ರಾಜ್ಯ ) ಜಿಲ್ಲೆ
  • ರೈತರಿಗೆ ಕೂಡಲೇ ಪರಿಹಾರ ನೀಡಿ :ಸಂಗಮೇಶ ಸಗರ
    In (ರಾಜ್ಯ ) ಜಿಲ್ಲೆ
  • ಕ್ರೀಡೆಗಳಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿ ಕೃಷ್ಣ ಕುಂಬಾರ ಗೆ ಸಾಧನೆಯ ಗರಿ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಬೇಕು ಕಾಯಕಲ್ಪ :ಮನವಿ
    In (ರಾಜ್ಯ ) ಜಿಲ್ಲೆ
  • ಕಂಪೆನಿ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿದ್ದ ದೇಶಭಕ್ತ ಸಂಗೊಳ್ಳಿ ರಾಯಣ್ಣ
    In (ರಾಜ್ಯ ) ಜಿಲ್ಲೆ
  • ಶೈಲಾ ಸುಳೆಭಾವಿ ಗೆ ಪಿಎಚ್ಡಿ ಪದವಿ
    In (ರಾಜ್ಯ ) ಜಿಲ್ಲೆ
  • ಸಂಖ್ಯಾಬಲದಿಂದ ಸಿಎಂ ಹುದ್ದೆ ನಿರ್ಧಾರ ಆಗಲ್ಲ :ಡಿಕೆಶಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.