ಉದಯರಶ್ಮಿ ದಿನಪತ್ರಿಕೆ
ಇಂಡಿ: ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲರು ಬುಧವಾರ ಪಟ್ಟಣದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಶಾಂತು ಧನಶೆಟ್ಟಿ ಇವರಿಗೆ ಸೇರಿದ ಎರಡು ದೊಡ್ಡ ಗೋಡಾನುಗಳು ನೆಲ ಅಂತಸ್ತಿನಲ್ಲಿದ್ದು ಅಲ್ಲಿದ್ದ ಎಲ್ಲ ಕೃಷಿಗೆ ಉಪಯೋಗಿಸುವ ಗೊಬ್ಬರ ಇತರೆ ಔಷಧಿ ಸಾಮಾನುಗಳು ಸಂಪೂರ್ಣ ನೀರಿನಲ್ಲಿದ್ದುದು ವೀಕ್ಷಿಸಿದರು.
ಆ ಪ್ರದೇಶದಲ್ಲಿ ಅಂದಾಜು ೧೦ ಕ್ಕೂ ಹೆಚ್ಚು ನೆಲ ಅಂತಸ್ತಿನ ಅಂಗಡಿಗಳಲ್ಲಿ ಮಳೆ ನೀರು ಬಂದಿದೆ. ಅದರಲ್ಲೂ ಒಂದೇ ದಿನ ಪಟ್ಟಣದಲ್ಲಿ ೫೦ ಮಿ.ಮಿ ಮಳೆಯಾಗಿದ್ದು ಅದೇ ಈ ಹಾನಿಯಾಗಿರುವದು ವೀಕ್ಷಿಸಿದರು.
ಅದರಂತೆ ರೇವಪ್ಪನ ಮಡ್ಡಿಯಲ್ಲಿರುವ ನೀರು ಇಂಡಿ ಹೊರವಲಯದ ಕಲ್ಲೂರ ಪೆಟ್ರೋಲ ಪಂಪ ಹತ್ತಿರ ಇಂಡಿ ಅಗರಖೇಡ ಮೇಲೆ ಬಂದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ನಿಂತು ರಸ್ತೆ ಬಂದ ಆಗಿರುವದು ವೀಕ್ಷಿಸಿ ಅದನ್ನು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಶಾಸ್ವತ ಪರಿಹಾರ ಮಾಡಬೇಕೆಂದು ಎಇಇ ದಯಾನಂದ ಮಠ ಮತ್ತು ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ ಇವರಿಗೆ ತಿಳಿಸಿದರು.
ಅದಲ್ಲದೆ ಸರಕಾರಿ ಪ್ರೌಢಶಾಲೆಗೆ ಹಳೆ ಬೊಳೆಗಾಂವ ರಸ್ತೆಯಿಂದ ಮತ್ತು ಹಿರೇ ಇಂಡಿ ರಸ್ತೆಯಿಂದ ರಸ್ತೆ ಸಂಪೂರ್ಣ ಹಾಳಾಗಿರುವದನ್ನು ವೀಕ್ಷಿಸಿದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಲೋಕೋಪಯೋಗಿ ಇಲಾಖೆಯ ದಯಾನಂದ ಮಠ, ಪುರಸಭೆ ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ, ಶಾಂತು ಧನಶೆಟ್ಟಿ , ಮಹಾವೀರ ಧನಶೆಟ್ಟಿ ಮತ್ತಿತರಿದ್ದರು.

