ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಲಾಷೆ
ಉದಯರಶ್ಮಿ ದಿನಪತ್ರಿಕೆ
ಮೈಸೂರು: ಬಾಲಮಂದಿರಗಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕರುನಾಡಿನ ಮುದ್ದು ಮಕ್ಕಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ದಿಂದ ಅಪರೂಪದ ಸಾಧಕರಾಗಿ ಬೆಳೆದು ಮುಂದೊಂದು ದಿನ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಂತಾಗಬೇಕೆಂದು ನಾನು ಹಂಬಲಿಸುವದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಬಾಲಮಂದಿರ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಲು ಧಾರವಾಡ ದಿಂದ ತಮ್ಮೊಂದಿಗೆ ತಂದಿದ್ದ ಸಿಹಿ ಪದಾರ್ಥ ಗಳೊಂದಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಬಾ ಲಮಂದಿರಕ್ಕೆ ಆಗಮಿಸಿದ್ದ ಅವರು ಬಾಲಕಿಯರ ಬಾಲಮಂದಿರದ ಮಕ್ಕಳನ್ನುದ್ದೆಶಿ ಅವರು ಮಾತನಾಡಿದರು.
” ಯಾರಲ್ಲಿ ಆತ್ಮವಿಶ್ವಾಸ ಇರುವದಿಲ್ಲವೋ ಅವರು ಮಾತ್ರ ಅನಾಥರು. ಯಾರಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಆತ್ಮ ವಿಸ್ವಾಸವಿದೆಯೋ ಅವರೆಂದು ಅನಾಥರಾಗಲು ಸಾಧ್ಯವಿಲ್ಲವೆಂದು ಹೇಳಿದ ಅವರು, ನೀವೆಲ್ಲರೂ ಉನ್ನತ ಸಾಧನೆ ಮಾಡಿ ನಾಡದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸುವಂತಾಗಬೇಕು. ನೀವೆಲ್ಲರೂ ಆ ಎತ್ತರಕ್ಕೆ ಬೆಳೆಯಬೇಕು. ಸಾಧಕರ ಸಾಧನೆಗಳು ನಿಮಗೆ ಸದಾ ಪ್ರೇರಣೆ ನೀಡಲೆಂದು ಸಂಗಮೇಶ ಹೇಳಿದರು.
ಮೈಸೂರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ, ಶಿಶು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಮಕ್ಕಳ ಕಲ್ಯಾಣಸಮಿತಿಯ ಅಧ್ಯಕ್ಷರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಮೆಚ್ಚುಗೆಗೆ ಪಾತ್ರವಾದ ಬಬಲೇಶ್ವರ ನಡೆ
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರು ಸಿಹಿ ವಿತರಿಸಿ ಮಕ್ಕಳಿಗೆ ದಸರಾ ಹಬ್ಬದ ಶುಭಾಶಯ ಕೊರಿದ್ದು ಹಾಗೂ ನಿಜವಾದ ಅವಕಾಶ ವಂಚಿತ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಿ ಅವರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದ ಅಧ್ಯಕ್ಷರ ಮಾದರಿಯ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

