ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾವು ಆದಿಕಾಲದಲ್ಲಿ ಗಿಡ ಮರಗಳ ಅಡಿಯಲ್ಲಿ ವಿವಿಧ ಪ್ರಕಾರಗಳ ವೈವಿದ್ಯಮಯ ಆಟ ಪಾಟ, ವಿದ್ಯಾಭ್ಯಾಸದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುವ ಪ್ರಸಂಗ ಇಂದು ಮರಳಿ ನೆನಪಿಸುವಂತಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಪುರಾತತ್ವವೀಧರರಾದ ರಮೇಶ ಮೂಲಿಮನಿ ಹೇಳಿದರು.
ನಗರದ ಗೋಳಗುಮ್ಮಟ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜೈನ್ ವಿಶ್ವವಿದ್ಯಾಲಯ ಬೆಂಗಳೂರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ಹಾಗೂ ಕ್ಯಾನವಾಸ್ ಆರ್ಟ್ ಫೌಂಡೇಶನ್ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಚಿಂತಾಮಣಿ ಕಲಾಕೇಂದ್ರದ ಜೈನ್(ಡೀಮ್-ಟು ಬಿ) ವಿಶ್ವವಿದ್ಯಾಲಯ ಡೀನ್ ಡಾ. ಅವಿನಾಶ ಕಾಟೆ ಅವರು ಮಾತನಾಡಿ, ಇಂದು ಹಲವಾರು ಚಿತ್ರಕಲಾ ವಿದ್ಯಾಲಯಗಳು ಮುಚ್ಚುವ ಸ್ಥಿತಿಯಲ್ಲಿವೆ. ಈ ಚಿತ್ರಕಲೆಯನ್ನು ಸಂರಕ್ಷಿಸಿ ಬೆಳೆಸುವ ಅವಶ್ಯಕತೆ ಇದೆ. ಈ ದಿಸೆಯಲ್ಲಿ ನಮ್ಮ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತ್ತಕೋತ್ರರ ಪದವಿಧರರಿಗೆ ಹಾಗೂ ಸಂಶೋದನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಶಿಬಿರಗಳನ್ನು ಆಯೋಜನೆ ಮಾಡಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಯ ಬದಾಮಿಯಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಈ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಂದ ವಿವಿಧ ಕಲಾಕೃತಿಗಳನ್ನು ರಚಿಸಲಾಯಿತು.
ಕ್ಯಾನವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಸ್ವಾಗತಿಸಿ, ವಂದಿಸಿದರು.
ಭಾಗವಹಿಸಿದ ಕಲಾವಿದರು
ಶಿಬಿರದಲ್ಲಿ ಹಿರಿಯ ಕಲಾವಿದ ಪಿ.ಎಸ್ ಕಡೇಮನಿ, ಮಹಾನಗರ ಪಾಲಿಕೆ ಸದಸ್ಯ ದಿನೇಶ ಹಳ್ಳಿ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ರಮೇಶ ಚೌಹಾಣ, ಮಹೇಶ ಕ್ಯಾತನ್, ಚಂದ್ರಕಾಂತ ಶೆಟ್ಟಿ, ವಿದ್ಯಾಧರ ಸಾಲಿ, ನರಸಿಂಹಮೂರ್ತಿ, ಜೀವಿ ಹಂಪಣ್ಣವರ, ಲಿಂಗರಾಜ್ ಕಾಚಾಪುರ, ಗಾಘವೇಂದ್ರ ಪಾಟೀಲ್, ವಿಶ್ವನಾಥ ಎಚ್.ಎಮ್, ಶಿವಾನಂದ ಅಥಣಿ, ಮುಸ್ತಾಕ್ ತಿಕೋಟ, ಡಾ.ರಹಮಾನ್ ಪಟೇಲ್, ರಾಜಶೇಖರ ಶಾಮಣ್ಣ, ಡಾ. ಶಶಿಕಲಾ ಹೂಗಾರ, ಎಂ.ಜಿ ಮಕಾಂದಾರ, ಸುಬಾಸ ಕೆಂಬಾವಿ, ರುದ್ರೇಶ ಕುಂಬಾರ, ದಾದಾ ಚಿತ್ರದುರ್ಗ, ಮದನ್, ವಿಶ್ವನಾಥ ಹಂಡಿ, ಪ್ರಶಾಂತ ಮನಗೂಳಿ, ಆನಂದ ಮಹಾಂತಮಠ, ಬಸವರಾಜ ಪಾಟೀಲ್, ಶಿವಣ್ಣ ಗೊಳಸಂಗಿ, ಅಮಿತ ಕಮ್ಮಾರ, ಡಾ.ಸುಬ್ಬಯ್ಯ ನೀಲಾ, ಮಹಾದೇವಿ ಕೊಪ್ಪದ, ದಾಕ್ಷಾಯಣಿ ವಿಮನಾಥ ಹಾಗೂ ರಾಜ್ಯದ ಇತರೆ ಕಲಾವಿದರು ಭಾಗವಹಿಸಿದ್ದರು.

