Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಜಗತ್ತನ್ನು ಬೆರಳ ತುದಿಯ ಮೇಲೆ ದೊರಕಿಸಿದ ಗೂಗಲ್
ವಿಶೇಷ ಲೇಖನ

ಜಗತ್ತನ್ನು ಬೆರಳ ತುದಿಯ ಮೇಲೆ ದೊರಕಿಸಿದ ಗೂಗಲ್

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ಸೆಪ್ಟಂಬರ್ ೨೭, ಶನಿವಾರ) ‘ಗೂಗಲ್’ ನ ೨೫ನೇಯ ವಾರ್ಷಿಕೋತ್ಸವದ ಪ್ರಯುಕ್ತ ಈ ವಿಶೇಷ ಲೇಖನ

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಇಂದಿನ ಡಿಜಿಟಲ್ ಯುಗದಲ್ಲಿ ಇಡೀ ಜಗತ್ತನ್ನು ಬೆರಳ ತುದಿಯಲ್ಲಿ ದೊರೆಯುವಂತೆ ಮಾಡಿದ್ದು, ಕೇಳಿದ ಪ್ರಶ್ನೆಗೆ ಉತ್ತರ, ಅವಶ್ಯಕ ಮಾಹಿತಿಯೊಂದಿಗೆ ನೀಡುವ ಏಕೈಕ ತಂತ್ರಜ್ಞಾನಯುಕ್ತವಾದ ಸಾಫ್ಟವೇರ ಅಂದರೆ ಅದುವೇ ‘ಗೂಗಲ್’. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧ ಹೀಗೆ ಮೋಬೈಲ್ ಬಳಸುವ ಎಲ್ಲರಿಗೂ ಗೂಗಲ್ ಎಂದರೆ ತಿಳಿಯದೇ ಇರಲಾರದು. ಪ್ರತಿದಿನ ನಮಗೆ ಅಗತ್ಯವಾದ ಮತ್ತು ತಿಳಿದುಕೊಳ್ಳಲು ಬಯಸುವ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಇದರಿಂದ ಪಡೆಯುತ್ತೇವೆ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಪಠ್ಯದಲ್ಲಿ ದೊರಕದೇ ಇರುವ ಯಾವುದೇ ಸಂಗತಿಯನ್ನು ಮತ್ತು ಸಂಪನ್ಮೂಲವನ್ನು ಒದಗಿಸುವ ಒಂದು ಸಾಧನವಾಗಿದೆ. ನಾವು ಪ್ರತಿದಿನ ಗೂಗಲ್ ಎಂಬುದನ್ನು ಬಳಸುತ್ತಿದ್ದರೂ ಅದರ ಪೂರ್ಣ ಹೆಸರು ಏನೆಂದು ಹುಡುಕಿಲ್ಲ. ಗೂಗಲ್ ಎಂದರೆ ಗ್ಲೋಬಲ್ ಆರ್ಗನೈಸೇಶನ್ ಆಫ್ ಓರಿಯಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ ಎಂಬುದಾಗಿದೆ. ಈ ಗೂಗಲ್ ಕಂಪನಿ ಇಂದು ವಿಶ್ವದ ಇಂಟರನೆಟ್ ಪ್ರಪಂಚವನ್ನು ಆಳುತ್ತಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ ಇಂಜಿನ್ ಇದಾಗಿದೆ.


ಗೂಗಲ್ ಎಂಬ ಹೆಸರು ಹೇಗೆ ಬಂತು: “ಅಮೇರಿಕದ ಗಣಿತ ತಜ್ಞ ಎಡ್ವರ್ಡ ಕಸ್ನರ್ ೧೯೨೦ ರಲ್ಲಿ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚನೆ ಮಾಡುತ್ತಿರುವಾಗ ಅದಕ್ಕೆ ಏನು ಹೆಸರಿಡಬೇಕೆಂದು ತನ್ನ ೯ ವರ್ಷ ಸೋದರ ಸಂಬಂಧಿಯ ಮಗನಾದ ಮಿಲ್ಟನ್ ಸಿರೋಟಾ ಈತನಿಗೆ ಕೇಳಿದಾಗ ಕುಚೇಷ್ಟೆಯಿಂದ ಆ ಹುಡುಗ ಹೇಳಿದ ಹೆಸರು ‘ಗೂಗಲ್’. ನಂತರ ಅದುವೇ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿತು. ಗೂಗಲ್ ಬೆಳೆದಂತೆಲ್ಲಾ ಅದರ ಕೀರ್ತಿ ಹೆಚ್ಚಾಗಿ ಗೂಗಲ್ ಎಂಬ ಹೆಸರು ವಿಶ್ವದಾದ್ಯಂತ ಮನೆಮಾತಾಗಿ ಪ್ರಸಿದ್ಧಿ ಪಡೆಯಿತು. ‘೧’ ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಸಿಗುವ ಪದಗಳಿಗೆ ‘ಗೂಗಲ್’ ಎನ್ನುತ್ತಾರೆ.
ಗೂಗಲ್ ಇದು ೧೯೯೮ ರಲ್ಲಿ ಸೆರ್ಗೆ ಬಿನ್ ಮತ್ತು ಲ್ಯಾರಿ ಪೇಜ್ ಇವರಿಂದ ಸ್ಥಾಪಿತವಾದ ಒಂದು ಅಮೇರಿಕನ್ ಕಂಪನಿಯಾಗಿದೆ. ೨೦೧೫ ರಿಂದ ಗೂಗಲ್ ಹೋಲ್ಡಿಂಗ್ ಕಂಪನಿ ಅಲ್ಫಾಬೆಟ್, ಇಂಕ್‌ನ ಅಂಗಸಂಸ್ಥೆಯಾಗಿದೆ. ಇದು ಅತಿ ಹೆಚ್ಚು ಬಳಕೆದಾರರ ಆನಲೈನ್ ಹುಡುಕಾಟದ ವಿನಂತಿಗಳನ್ನು ನಿರ್ವಹಿಸುತ್ತದೆ. ಇದರ ಪ್ರಧಾನ ಕಛೇರಿ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂ ನಲ್ಲಿದೆ. ಈ ಸಂಸ್ಥೆಯ ಪ್ರಮುಖ ಉದ್ಧೇಶವೆಂದರೆ ಜಾಗತಿಕವಾಗಿ ಅವಶ್ಯಕವಾದ ಮಾಹಿತಿ ಮತ್ತು ವಿಷಯವನ್ನು ಸುಲಭವಾಗಿ ದೊರಕುವಂತೆ ಮತ್ತು ಉಪಯೋಗಿಸುವಂತೆ ಮಾಡುವುದಾಗಿದೆ. ಈ ಸಪ್ಟಂಬರ ೨೭ ರಂದು ಸಂಸ್ಥೆಯು ತನ್ನ ೨೫ ನೇಯ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಇದರ ಇನ್ನೊಂದು ವಿಶೇಷತೆ ಎಂದು ಹೇಳಬಹುದು.
ಗೂಗಲ್ ನ ಪ್ರಯೋಜನಗಳು: ಗೂಗಲ್ ತಂತ್ರಜ್ಞಾನದ ಪ್ರಪಂಚದಲ್ಲಿ ಒಂದು ಶಕ್ತಿಶಾಲಿಯಾದ ತಂತ್ರಜ್ಞಾನವಾಗಿದ್ದು, ಮಾಹಿತಿ ಹುಡುಕಲು, ಸಂವಹನ ಮಾಡಲು, ಅವಶ್ಯಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು, ವ್ಯವಹಾರ, ವ್ಯಾಪಾರ, ಮಾರ್ಕೆಟಿಂಗ್ ತಂತ್ರಗಾರಿಕೆಗಳನ್ನು ಅರಿಯಲು ಮತ್ತು ದೈನಂದಿನ ಜೀವನವನ್ನು ಹೆಚ್ಚು ಸುಲಭಗೊಳಿಸುವಲ್ಲಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆರ್ಥಿಕ ಅಭಿವೃದ್ಧಗೆ ಸಹಕಾರಿಯಾಗಿದೆ.
ಕೊನೆಯ ನುಡಿ: ಆಡು ಮುಟ್ಟದ ಗಿಡವಿಲ್ಲ, ಗೂಗಲ್ ನೀಡದ ಮಾಹಿತಿಯಿಲ್ಲ ಎಂಬಂತೆ ಜಗತ್ತಿನಲ್ಲಿ ಏಲ್ಲೆಲ್ಲೂ ಸಿಗದ ವಿಷಯ, ಮಾಹಿತಿ ಮತ್ತು ಅಗತ್ಯವಾದ ಸಂಗತಿಗಳನ್ನು ಪೂರೈಸುವಮತ್ತು ‘ಗೂಗಲ್ ಗುರು’ ವಾಗಿ ಪರಿಣಮಿಸಿರುವ ಈ ಗೂಗಲ್ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಸಾಧಿಸಲಿ ಮತ್ತು ಜನರಿಗೆ ಉಪಯುಕ್ತಕಾರಿ ಮಾಹಿತಿಯನ್ನು ನೀಡಲೆಂಬುದೇ ನನ್ನ ಆಶಯ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!
    In (ರಾಜ್ಯ ) ಜಿಲ್ಲೆ
  • ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ
    In (ರಾಜ್ಯ ) ಜಿಲ್ಲೆ
  • ತಲ್ಲಣಿಸದಿರು ತಾಳು ಮನವೇ..
    In ಭಾವರಶ್ಮಿ
  • ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದಿಂದ ಶ್ರೀಗಳಿಗೆ ಅಪಮಾನ :ಸಂಸದ ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೋಟರಿ ಸಂಸ್ಥೆಯಿಂದ ಕಣ್ಣು ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪು.ಕೆ. ಪಟ್ಟಣಕ್ಕೆ ಸಚಿವ ಶಿವಾನಂದರ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಚನ್ನಬಸವಣ್ಣನವರು ಯುವಕರ ಹೆಗ್ಗುರುತು :ಡಿ.ಎನ್.ಅಕ್ಕಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.