ಉದಯರಶ್ಮಿ ದಿನಪತ್ರಿಕೆ
ಇಂಡಿ: ಆಟವಾಡಲು ಹೋಗಿ ಬಾವಿಯಲ್ಲಿ ಬಾಲಕಿ ಬಿದ್ದಿದ್ದ ಬಾಲಕಿಯ ಶವ ಮಂಗಳವಾರ ಪತ್ತೆಯಾಗಿದೆ. ಇಂಡಿ ಪಟ್ಟಣದ ಬಳಿಯ ಧನಸಿಂಗ್ ( ಮೋನಪ್ಪ ನಗರ) ತಾಂಡಾದಲ್ಲಿ ಈ ಘಟನೆ ಸಂಭವಿಸಿದೆ. ತಾಯಿಯೊಂದಿಗೆ ಕುರಿ ಮೇಯಿಸುವಾಗ ಆಟವಾಡುತ್ತಾ ಬಾವಿಯಲ್ಲಿ 8 ವರ್ಷದ ಅರ್ಚನಾ ರಾಠೋಡ ಬಾವಿಯಲ್ಲಿ ನಿನ್ನೆ ಸಾಯಂಕಾಲ ಬಾವಿಯಲ್ಲಿ ಬಿದ್ದಿದ್ದಳು. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿ
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,
ಕರ್ನಾಟಕ ಯುವರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ವಿಜಯ ಸುಭಾಷ ರಾಠೋಡ, ಸುನೀಲ ರಾಠೋಡ ,ಕಾರ್ಯದರ್ಶಿ ಆನಂದ ಚವ್ಹಾಣ, ಬಂಜಾರಾ ಕ್ರಾಸ ಮಾಜಿ ಅಧ್ಯಕ್ಷ ಸಂಜು ಲಕ್ಷ್ಮಣ ರಾಠೋಡ, ಸೇರಿದಂತೆ ಅನೇಕರು ಇದ್ದರು.