ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವದ ಉತ್ತರಾಧನೆ ಭಕ್ತಿಭಾವದಿಂದ ಅದ್ಧೂರಿಯಾಗಿ ಜರುಗಿತು.
ಪಟ್ಟಣದ ವಿಠ್ಠಲಮಂದಿರದಲ್ಲಿ ಕಳೆದ ೩ ದಿನಗಳಿಂದ ಆರಂಭಗೊಂಡ ಆರಾಧನಾ ಮಹೋತ್ಸವದಲ್ಲಿ ಮೊದಲದಿನ ಪೂರ್ವಾರಾಧನೆ, ಎರಡನೆಯ ದಿನ ಮಧ್ಯಾರಾಧನೆ ನಂತರ ಉತ್ತರಾಧನೆ ಜರುಗಿದವು. ಪ್ರತಿದಿನ ಬೆಳಿಗ್ಗೆ ರಾಯರ ಮಹಾಪೂಜೆ, ಅಷ್ಠೋತ್ತರ ಸಾಂಗವಾಗಿ ಜರುಗಿ ನಂತರ ತೀರ್ಥ, ಮಹಾಪ್ರಸಾದ ವಿತರಣೆಯಾದವು. ರಾತ್ರಿ ರಾಯರ ಕುರಿತು ಭಕ್ತಿಗೀತೆಗಳ ಭಜನೆ ಜರುಗಿತು.
ಮಹೋತ್ಸವದಲ್ಲಿ ವೈದ್ಯರುಗಳಾದ ಆರ್.ಆರ್.ನಾಯಿಕ್, ಸತೀಶ ನಾಡಗೌಡ, ಚಿದಂಬರ ಸೇವಾ ಸಮಿತಿಯ ವೆಂಕಟೇಶ ಕುಲಕರ್ಣಿ, ಸುಧೀರ ಪಾಟೀಲ, ಶ್ರೀಪಾದ ಜೋಷಿ, ಗುರುರಾಜ್ ಕುಲಕರ್ಣಿ, ನರೇಂದ್ರ ನಾಡಗೌಡ, ಪ್ರಲ್ಹಾದ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಅಶೋಕ ಜೋಷಿ, ಶರತ್ ಕುಲಕರ್ಣಿ, ಸಂಗೀತಾ ನಾಯಿಕ್, ಮಾಧುರಿ ನಾಡಗೌಡ, ಶಶಿಕಲಾ ಕುಲಕರ್ಣಿ, ಪ್ರೀತಿ ಪಾಟೀಲ, ವಿದ್ಯಾಶ್ರೀ ಕುಲಕರ್ಣಿ, ಭಾವನಾ ಪುರೋಹಿತ, ವಿಜಯಲಕ್ಷ್ಮಿ ಕುಲಕರ್ಣಿ, ಪ್ರಮೀಳಾಬಾಯಿ ಕುಲಕರ್ಣಿ, ರೇಖಾ ನಾಡಗೌಡ, ಸುಜಾತಾ ನಾಡಗೌಡ, ಅಂಬಿಕಾ ಕುಲಕರ್ಣಿ, ಅನೀತಾ ಕುಲಕರ್ಣಿ, ಶ್ರೀದೇವಿ ಜೋಷಿ, ಉಮಾಬಾಯಿ ಜೋಷಿ, ವಾಸಂತಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.