ಮೋರಟಗಿಯ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಕುಂದು ಕೊರತೆ ಸಭೆ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ರೈತರಿಗೆ ಹಾಗೂ ಕುಡಿಯುವ ನೀರಿಗೆ ವಿದ್ಯುತ್ ಅಭಾವ ಆಗದಂತೆ ನಿಗಾ ವಹಿಸಿ ಗ್ರಾಹಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಎಇಇ ಚಂದ್ರಕಾಂತ ನಾಯಕ್ ಸೂಚಿಸಿದರು.
ಗುರುವಾರ ಗ್ರಾಮದ ಹೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಂಡ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ರೈತಾಪಿ ವರ್ಗ ಹೆಚ್ಚಿಗೆ ಇರುವುದರಿಂದ ನಮ್ಮ ಇಲಾಖೆಯ ಕೆಲವು ನಿಯಮಾವಳಿ ಗೊತ್ತಿರುವುದಿಲ್ಲ ರೈತರೊಂದಿಗೆ ಹೊಂದಿಕೊಂಡು ಇಲಾಖೆಯ ಮಾರ್ಗ ಸೂಚಿಗಳನ್ನು ವಿವರಿಸಬೇಕು ಮೋರಟಗಿ ಗ್ರಾಮವು ಕೆಲವೇ ದಿನಗಳಲ್ಲಿ ಹೂಬಳಿ ಆಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಹೀಗಾಗಿ ಈ ಗ್ರಾಮವನ್ನು ಸೋಲಾರ ಗ್ರಾಮವೆಂದು ಪರಿಗಣಿಸಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ಮಾತನಾಡಿ ಕಮರ್ಶಿಯಲ್ ಗಳಿಗೆ ಸೋಲಾರ್ ಅಳವಡಿಸುವ ವ್ಯವಸ್ಥೆ ಮಾಡುತ್ತೇವೆ ಗ್ರಾಹಕರೂ ಕೂಡಾ ಸಿಬ್ಬಂದಿಗಳ ಜೊತೆಗೆ ಸೌಜನ್ಯದಿಂದ ಇದ್ದು ತಮ್ಮ ವಿದ್ಯುತ್ ಬಿಲ್ಲನ್ನು ನಿಗದಿ ಪಡಿಸಿದ ದಿನಾಂಕದಂದು ಭರಣಾ ಮಾಡಬೇಕು ವಿದ್ಯುತ್ ಸಮಸ್ಯೆ ಆಗುವುದು ಸಹಜ ಹಂತ ಪರಿಸ್ಥಿತಿಯಲ್ಲಿ ತಾವುಗಳು ನಮ್ಮ ಸಿಬ್ಬಂದಿಗಳಿಗೆ ಸಹಕಾರ ನೀಡಿ ಕೆಲಸ ಕಾರ್ಯಗಳು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಸಮೀತಿ ಯೋಜನೆಯ ಸದಸ್ಯ ಸಲೀಮ್ ಕಣ್ಣಿ ಸಮಾಜ ಸೇವಕಿ ಮಲ್ಲಮ್ಮ ಅತನೂರ ಸೇರಿದಂತೆ ಇತರರು ಗ್ರಾಮದಲ್ಲಿ ಹಾಗೂ ರೈತರ ಪಂಪಸೆಟ್ ವಿದ್ಯುತ್ ಸಮಸ್ಸೆ ಕುರಿತು ಮನವಿ ಸಲ್ಲಿಸಿದರು ಮನವಿಗೆ ಕೂಡಲೇ ಸ್ಪಂದಿಸಿದ ಎಇಇ ಸಿಬ್ಬಂದಿಗಳನ್ನು ಕರೆದು ತಕ್ಷಣ ಆಯಾ ಕಾರ್ಯಗಳನ್ನು ಸರಿಪಡಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಾಖಾಧಿಕಾರಿ ಬಸಪ್ಪ ಉಪ್ಪಾರ, ಶಾಖಾ ಮೇಲ್ವಿಚಾರಕ ಆರ್ ಎಂ ಯಡ್ರಾಮಿ, ಮಲ್ಲನಗೌಡ ಬಿರಾದಾರ, ಗ್ರಾಮ ವಿದ್ಯುತ್ ಪ್ರತಿನಿಧಿ ರಫೀಕ್ ಕಣ್ಣಿ, ನಬಿಪಟೇಲ್ ಗೊರಗುಂಡಗಿ, ದತ್ತು ಸಿನ್ನುರ, ಗೌತಮಸಿಂಗ ಸಿಲೆದಾರ, ಹಣಮಂತಗೌಡ ಪಾಟೀಲ್, ಎಸ್ ಜಿ ದಶವಂತ, ಮಲ್ಲು ದೇಸಾಯಿ ನಜೀರ್ ಮೋಕಾಶಿ, ಸೊಯೆಲ್ ಮುಲ್ಲಾ, ಸೇರಿದಂತೆ ಅನೇಕರು ಇದ್ದರು.

