ಉದಯರಶ್ಮಿ ದಿನಪತ್ರಿಕೆ
ಚಡಚಣ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಆ.೦೬ ಬುಧವಾರ ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ, ಚಡಚಣ ತಾಲೂಕಿನ ಹಾಲಹಳ್ಳಿ ಅಲ್ಪಸಂಖ್ಯಾತರ ವಸತಿ ಶಾಲೆಯ ವಿದ್ಯಾರ್ಥಿನಿ ಸ್ವಾಲೇಹಾ ರಜಾಕ್ ನದಾಫ ಅವರು ೨೦೨೪–೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೦೬ ಅಂಕಗಳನ್ನು ಹಾಗೂ 96.96% ಗಳಿಸುವ ಮೂಲಕ ಪ್ರಭಾವಶಾಲಿ ಸಾಧನೆ ತೋರಿದ್ದಾರೆ.
ಗಣಿತ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಗಳಿಸಿರುವ ಇವಳ ಸಾಧನೆಗೆ ಮಾನ್ಯ ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರ ಸಮ್ಮುಖದಲ್ಲಿ ಒಂದು ಲ್ಯಾಪ್ಟಾಪ್ ಹಾಗೂ ₹೧೦,೦೦೦ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಈ ಸಾಧನೆಯಿಂದ ಹಾಲಹಳ್ಳಿ ವಸತಿ ಶಾಲೆಗೆ ಹೆಮ್ಮೆ ತಂದಿದ್ದು, ವಿದ್ಯಾರ್ಥಿನಿ ಸ್ವಾಲೇಹಾ ನದಾಫ ಅವರಿಗೆ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳು,ಹಾಲಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಕುಮಾರ ಕಾಂಬಳೆ,ನಿಲಯ ಪಾಲಕ ಮಲ್ಲಿಕಾರ್ಜುನ ಹುಬ್ಬಳ್ಳಿ, ಮೋಹನಕುಮಾರ ದಿಬ್ಬದಳ್ಳಿ, ಜಿ.ಎಸ್. ಬನಸೋಡೆ, ಅಪ್ಪಾಸಾಹೇಬ ಅಂಕುಶ, ಸುನೀಲ ಅಗಸರ, ಸಂಗಮೇಶ ಹಿಟ್ನಳ್ಳಿ, ಗಿರೀಶ ಕಾಂಬಳೆ, ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹೃದಯಪೂರ್ವಕವಾಗಿ ಪ್ರಶಸ್ತಿ ವೀಜೆತೆ ಸ್ವಾಲೇಹಾ ನದಾಫ ಇವಳಿಗೆ ಗುರುವಾರ ಶ್ಲಾಘನೆ ಸಲ್ಲಿಸಿದ್ದಾರೆ.

