ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ತಾಲೂಕಿನ ಶಿವಣಗಿ ಗ್ರಾಮದದ ಹನುಮಾನ ದೇವಸ್ಥಾನದ ಹತ್ತಿರ ಇರುವ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದ ಮಾರುಕಟ್ಟೆಯಲ್ಲಿ ಉಪಜೀವನಕ್ಕಾಗಿ ಮಾರುಕಟ್ಟೆಗೆ ವ್ಯಾಪಾರ ಮಾಡಲು ಸುತ್ತ ಮುತ್ತಲಿನ ಗ್ರಾಮದಿಂದ ಬಂದ ವ್ಯಾಪಾರಸ್ಥರಿಗೆ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ ಮುಂತಾದ ಮೂಲಭೂತ ಸೌಲಭ್ಯದಿಂದ ಬಳಲುತ್ತಿದ್ದಾರೆ. ಇದೇ ಜಾಗದಲ್ಲಿ ಮಳೆಯಾದರೆ ಚರಡಂಡಿ ಅಸ್ತವ್ಯಸ್ಥಗೊಂಡು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲಿರುವ ಮಾರುಕಟ್ಟೆಗಾಗಿ ನಿರ್ಮಿಸಿದ ಜಾಗವು ತುಂಬಾ ಚಿಕ್ಕದಾಗಿದ್ದು, ಸಾರ್ವಜನಿಕರಿಗೆ ಸಂಚಾರ ಮಾಡಲು ಅಥವಾ ವ್ಯಾಪಾರ ಮಾಡಲು ಗಿಜಿಗಿಜಿಯಾಗಿ ಆಡಚಣೆಯಾಗುತ್ತಿದೆ. ಆದ ಕಾರಣ ಇಂತಹ ಗಂಭೀರ ವಿಷಯವನ್ನು ಪರಿಗಣಿಸಿ ಶಿವಣಗಿ ಮಾರುಕಟ್ಟೆ ಜನರಿಗೆ ಅನುಕೂಲ ಕಲ್ಪಿಸಿಕೊಡಲು ಒತ್ತಾಯಿಸಿದರು.
ಇಲ್ಲಿಯ ವ್ಯಾಪಾರಸ್ಥರಿಗೆ ಸಾರ್ವಜನಿಕರಿಗೆ ಮೂಲಭೂತ ಅವಕಾಶ ಕಲ್ಪಿಸಿಕೊಡದೇ ಹೋದಲ್ಲಿ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಜುಳಾ ವಾಲಿ, ವಾಣಿಶ್ರೀ ಪಟ್ಟಣಶೆಟ್ಟಿ, ಸುಮಿತ್ರಾ ಪಟ್ಟಣಶೆಟ್ಟಿ, ಸಿದ್ದಮ್ಮ ಹೆರೂರ, ಸುರೇಖಾ ಅಂಬಳನೂರ, ಜಯಶ್ರೀ ಬಿರಾದಾರ, ರೇಣುಕಾ ದೊಡಮನಿ, ಶಶಿಕಲಾ ಹಡಪದ, ಅಂಬಿಕಾ ಕಾರಜೋಳ, ಕಮಲಾಕ್ಷಿ ಅಂಬಿಗೇರ, ಲಕ್ಕಮ್ಮಾ ವರಟ್ಟಿ, ಶರಣಬಸು ಹೆರೂರ, ರಾಜು ಬಿಸೆ, ಯಮನಪ್ಪ ಬೂದಿಹಾಳ, ಬಸವರಾಜ ಗಳವೆ ಮುಂತಾದವರು ಉಪಸ್ಥಿತರಿದ್ದರು.

