ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಬಳಿಯ ಲೋಣ ಕ್ರಾಸ್ದಿಂದ ಬರಗೂಡಿ ಹೋಗುವ ಮಾರ್ಗ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಲಚ್ಯಾಣ ಗ್ರಾಮದ ರೈತರು ಇಂಡಿ ಪಟ್ಟಣದಲ್ಲಿನ ಮಿನಿ ವಿಧಾನ ಸೌಧದಲ್ಲಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ಅವರಿಗೆ ಮಂಗಳವಾರದಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಕಲ್ಲಪ್ಪ ದೊಡಮನಿ ಮಾತನಾಡಿ, ಲಚ್ಯಾಣ ಗ್ರಾಮದಲ್ಲಿ ದಲಿತ ಸಮಾಜದ ಹಲವು ಜನರು ಜಮೀನಿಗೆ ದಾರಿ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿಂದೆ ಇದ್ದ ಹಳೆಯ ಕಾಲದ ಬರಗೂಡಿ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಬಡ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ವಿವರಿಸಿದರು.
ಇನ್ನೋರ್ವ ದಲಿತ ಮುಖಂಡ ಪಂಡಿತ ಹತ್ತಳ್ಳಿ ಮಾತನಾಡಿ, ಮಳೆಗಾಲದ ಈ ಸಂದರ್ಭದಲ್ಲಿ ಮುಂಗಾರು ಬೇಸಾಯ ಮಾಡಲೆಂದು ಜಮೀನಿಗೆ ಸಾಗಲು ಮಾರ್ಗವೇ ಇಲ್ಲ. ಲೋಣ ಕ್ರಾಸ್ನಿಂದ ೧ ಕಿ.ಮೀ. ದಾರಿ ಬಂದ್ ಆಗಿದೆ. ಈ ಕುರಿತು ಕಳೆದ ೫ ವರ್ಷಗಳ ಹಿಂದೆ ತಹಶೀಲ್ದಾರರಿಗೆ ಈ ಹಿಂದಿನ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಆದ್ದರಿಂದ ಕೂಡಲೆ ತಾವೂ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗೆ ದಾರಿ ಒದಗಿಸಬೇಕು ಎಂದು ವಿನಂತಿಸಿದರು.
ಈ ಮನವಿ ಸ್ಪಂದಿಸಿದ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ಕೂಡಲೆ ದೂರವಾಣ ಯ ಮೂಲಕ ಸಂಬAಧಿಸಿದ ಎಡಿಎಲ್ಆರ್ ಜೊತೆ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಸರ್ವೇ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಣ ಗ್ರಾಮದ ಸಿದ್ದು ಚೌಗಲೆ, ಲಚ್ಯಾಣ ಗ್ರಾಮಸ್ಥರಾದ ಮಲಕಪ್ಪ ಹೂಗಾರ, ಪ್ರಕಾಶ ಸತ್ತಿ, ದಲಿತ ಸಮಾಜದ ದುಂಡಪ್ಪ ಶಿವಶರಣ, ಪ್ರಕಾಶ ಶಿವಶರಣ, sಸದಾ ಬನಸೋಡೆ, ಸುನೀಲ ಬನಸೋಡೆ, ಉಪಸ್ಥಿತರಿದ್ದಾರೆ.

