ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ವೈದ್ಯ, ಇಂಜನೀಯರ್ಗಳಾಗಿ ವೇದಿಕೆಯಲ್ಲಿ ಕುಳಿತು ಸನ್ಮಾನ ಸ್ವೀಕರಿಸುವಂತಾಗಲಿ ಎಂದು ಪದವಿಪೂರ್ವ ಉಪನಿರ್ದೇಶಕರ ಕಾರ್ಯಾಲಯದ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಶನಿವಾರ ಜರುಗಿದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಇ.ಎಲ್ಸಿ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ನಮ್ಮ ಸಾಧನೆ ಪಾಲಕರು, ಶಿಕ್ಷಕರು ಸೇರಿದಂತೆ ನಾವು ಕಲಿತ ಶಿಕ್ಷಣ ಸಂಸ್ಥೆಗೆ ಗೌರವ ದೊರಕಿಸುವಂತಾಗಬೇಕು. ಆಗ ಮಾತ್ರ ಆತ್ಮತೃಪ್ತಿ, ಸಮ್ಮಾನ ದೊರೆಯಲು ಸಾಧ್ಯ ಎಂದರು.
ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಪಿ.ಸಾಲಕ್ಕಿ ಮಾತನಾಡಿ, ಪಟ್ಟಣದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಬಿಎಲ್ಡಿಇ ಸಂಸ್ಥೆಯ ಕೈಗೊಂಡ ಕಾರ್ಯಗಳ ಕುರಿತು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳಿಗೆ ವ್ಹಾಲಿಬಾಲ್ ಸರ್ವಿಸ್ ಮಾಡುವ ಮೂಲಕ ವಿಜಯಪುರದ ಗೆಜ್ಜೆ ಕರಿಯರ್ ಅಕಾಡಮಿ ಅಧ್ಯಕ್ಷ ಸುರೇಶ ಗೆಜ್ಜೆ ಚಾಲನೆ ನೀಡಿದರು. ಬಸನಗೌಡ ಲಿಂಗದಳ್ಳಿ (ಚಬನೂರ) ೫೦ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಬಿಡುಗಡೆಗೊಳಿಸುವುದರ ಜೊತೆಗೆ ಎನ್ಎಸ್ಎಸ್ ಘಟಕ ಉದ್ಘಾಟಿಸಿದರು.
ನಂತರ ಗಣ್ಯರು ಇಎಲ್ಸಿ ಯ ಮತದಾರರ ನಮೂನೆ ನೋಂದಣಿ ಬಿಡುಗಡೆ ಮಾಡಿದರು.
ಲಕ್ಷ್ಮಿ ರಾಠೋಡ ಭರತನಾಟ್ಯ ಹಾಗೂ ಸವಿತಾ ಮೇಲಿನಮನಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅಕ್ಷತಾ ಪೂಜಾರಿ, ಲಕ್ಷ್ಮಿ ಪ್ಯಾಟಿ,ಪಲ್ಲವಿ ವಿದ್ಯಾರ್ಥಿನೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ, ಮುಖ್ಯಶಿಕ್ಷಕ ವ್ಹಿ.ಎಂ.ಪಾಟೀಲ, ಸ್ಥಳೀಯ ಸಲಹಾ ಸಮೀತಿ ಸದಸ್ಯರಾದ ಶರಣಪ್ಪ ಸಾಲಕ್ಕಿ, ಕಾಶೀನಾಥ ಸಾಲಕ್ಕಿ, ಸಿಬ್ಬಂದಿ ಎಸ್.ಎಮ್.ಕಿಣಗಿ, ಕೆ.ವ್ಹಿ.ಸಾಲಿಮಠ, ಐ.ಬಿ.ಬಿದರಿ, ವ್ಹಿ.ಆರ್.ಹಿರೇಮಠ, ನವೀನಕುಮಾರ, ಬಿ.ಬಿ.ಬಿರಾದಾರ, ಸಾಹೇಬಗೌಡ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಶೀಘ್ರವೇ ಸಿಬಿಎಸ್ಇ ಶಾಲೆ ಆರಂಭ
ಪಟ್ಟಣದಲ್ಲಿ ಬಿಎಲ್ಡಿಇ ಸಂಸ್ಥೆಯ ಹಳೇ ಪ್ರೌಢಶಾಲಾ ಆವರಣದಲ್ಲಿ ಶೀಘ್ರವೇ ಸಿಬಿಎಸ್ಇ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಅಧೀಕ್ಷಕ ಎಸ್.ಎ.ಬಿರಾದಾರ(ಕನ್ನಾಳ ಗೌಡರು) ಮಾಹಿತಿ ನೀಡಿದರು.

