ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆರಾಧ್ಯದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಬಸವೇಶ್ವರ ಗೋ ಶಾಲಾ ಟ್ರಸ್ಟ್ (ರಿ) ಆಂದೋಲಾ ನಿರ್ಮಾಣದ ರೈತ ನಿನಗೆ ಗೋ ಶಾಪ? ಚಲನಚಿತ್ರದ ಚಿತ್ರಿಕರಣ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಲೋಕ ಕಲ್ಯಾಣ ಯಜ್ಞದಲ್ಲಿ ಭಾಗವಹಿಸಿ, ಮೊದಲ ಲುಕ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗೋ ಮಾತೆ ರಕ್ಷಣೆ ಹಾಗೂ ಗೋವಿನ ಮಹತ್ವ ಸಾರುವ ರೈತ ನಿನಗೆ ಗೋ ಶಾಪ? ಚಲನಚಿತ್ರವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದ್ದು, ಯಾವುದೇ ಅಡೆತಡೆ ಉಂಟಾಗದೆ ಚಿತ್ರಿಕರಣ ಯಶಸ್ವಿಯಾಗಿ ಪೂರೈಸಿ, ಅತ್ಯುತ್ತವ ಚಿತ್ರವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಗೌರ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ವಿಜಯಕುಮಾರ ಡೋಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ರಮೇಶ ಹಳ್ಳದ, ಸಿಇಒ ಎನ್.ಎಂ.ಪ್ಯಾಟಿ,ಸುಭಾಸ ಮರನೂರ, ಬಸವೇಶ್ವರ ಗೋ ಶಾಲಾ ಟ್ರಸ್ಟ್ ಅಧ್ಯಕ್ಷರು ಹಾಗೂ ಚಿತ್ರದ ನಿರ್ದೇಶಕ ಎಸ್.ವಿರೇಶ, ಪ್ರಧಾನ ಕಾರ್ಯದರ್ಶಿ ದೌಲಪ್ಪ ಪೂಜಾರಿ ಹಾಗೂ ಟ್ರಸ್ಟನ್ ಸದಸ್ಯರು ಉಪಸ್ಥಿತರಿದ್ದರು.