ಉದಯರಶ್ಮಿ ದಿನಪತ್ರಿಕೆ
ಅಥಣಿ: ಗ್ರಾಮಿಣ ಬಾಗದ ಜನರಿಗೆ ಮತ್ತು ರೈತಾಪಿ ವರ್ಗಕ್ಕೆ ಅತ್ಯುನ್ನತ ಬ್ಯಾಂಕಿಂಗ್ ಸೇವೆ ಒದಗಿಸುವ ಮಹತ್ವಾಂಕ್ಷೆಯೊಂದಿಗೆ ಪ್ರಾರಂಭಗೊಂಡು ಅವರೊಂದಿಗೆ ಗ್ರಾಹಕ ಸ್ನೇಹಿ ಉತ್ತಮ ಪಾಲುದಾರಿಕೆಯೊಂದಿಗೆ ವ್ಯವಹರಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬ್ಯಾಂಕ್ ಆಗಿ ಬೆಳೆಯತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ತೆಲಸಂಗ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಸೀಮಾ ನಾಯಕ ಹೇಳಿದರು.
ತೆಲಸಂಗ ಹೊಬಳಿ ಪತ್ರರ್ಕತರ ಗೆಳೆಯರ ಬಳಗದಿಂದ ತೆಲಸಂಗ ಗ್ರಾಮದ ಕೆ ವಿ ಜಿ ಬ್ಯಾಂಕಿನಲ್ಲಿ ಆಯೋಜಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಬ್ಯಾಂಕಿನ ವತಿಯಿಂದ ಸುಮಾರು ೫ ಸಾವಿರ ರೈತರಿಗೆ ಸರಕಾರ ಸಹಾಯದಿಂದ ಬೆಳೆಸಾಲವನ್ನು ವಿತರಿಸಲಾಗಿದೆ ಸದೃಡವಾದ ಆರ್ಥಿಕತೆಯನ್ನು ನಿರ್ಮಿಸಲು ಬ್ಯಾಂಕುಗಳು ಪಾರದರ್ಶಕ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕವಾಗಿರುತ್ತದೆ. ನಮ್ಮ ಕೆ ವಿ ಜಿ ಬಾಂಕ್ ಗ್ರಾಮಿಣ ಬಾಗದ ಆರ್ಥಿಕತೆಯನ್ನು ಸದೃಡಗೊಳಿಸಲು ಅವಶ್ಯವಿರುವ ಹಣಕಾಸಿನ ನೆರವು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ನಾನು ಈ ಬ್ಯಾಂಕಿಗೆ ಮೊದಲ ಮಹಿಳಾ ಮ್ಯಾನೇಜರ್ ಆಗಿರುವದರಿಂದ ಈ ಬಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಯೊಜನೆ ಹಾಕಿಕೊಂಡಿದ್ದು, ನಮ್ಮ ಬ್ಯಾಂಕಿನಲ್ಲಿ ಲಭ್ಯವಿರುವ ಯೋಜನೆಗಳ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

