ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿರಬೇಕು. ನೊಂದವರು, ಅಶಕ್ತರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭರವಸೆಯ ಬೆಳಕಾಗಬೇಕೆ ಹೊರತು ಭಯ ಹುಟ್ಟಿಸಬಾರದು. ಸಾರ್ವಜನಿಕರೊಂದಿಗಿನ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಶಿಕ್ಷಣ ಇಲಾಖೆಗೆ ಬರುವ ಪ್ರತಿಯೊಬ್ಬರನ್ನು ಗೌರವಯುತವಾಗಿ ಕಾಣಬೇಕು ಎಂದು ವಿಕಾಸ ಹೊಸಮನಿ ಹೇಳಿದರು.
ಸೋಮವಾರ ಪಟ್ಟಣದ ಬಿಇಓ ಕಾರ್ಯಾಲಯದಲ್ಲಿ ವಿಕಾಸ ಹೊಸಮನಿರವರು ತಮ್ಮ ಕುಂದು ಕೊರತೆ ಹೇಳಲು ಬಿಇಓ ಆಫೀಸ್ಗೆ ಬಂದಾಗ ನಿಮ್ಮ ಕೆಲಸ ನಾನು ಮಾಡುವುದಿಲ್ಲ. ನನ್ನ ಆಫೀಸ್ನಿಂದ ನೀನು ಹೊರಗೆ ನಡೆ ಎಂದು ಹೇಳುತ್ತಿರುವುದು ಸರಿಯಿಲ್ಲ. ನಿಮ್ಮ ವರ್ತನೆ ಬದಲಿಸಿ ಕೊಳ್ಳಿ. ನಿಮ್ಮ ವರ್ತನೆಯಿಂದ ಸಾರ್ವಜನಿಕರ ವಲಯದಲ್ಲಿ ಮುಜಗರಕ್ಕೆ ಎಡೆಮಾಡಿದೆ. ನಾನು ಮೇಲಾಧಿಕಾರಿಗಳು ಬರುವವರೆಗೆ ಆಫೀಸ್ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಿವಪುತ್ರ ಬಗಲಿ, ಆನಂದ ಪವಾರ, ಸುನೀಲ ಕಾಲೇಭಾಗ, ವಿನೊದ ಕಾಳೆ, ಆಕಾಶ ವಠಾರ, ಅರುಣ ಕೇದರ, ಅನೀಲ ಕಾಲೇಭಾಗ, ರಾವೂಲ ಮನಗೂಳಿ, ಕಿರಣ ಗುಂದಗಿ, ಅಕಲೇಶ ಹೊಸಮನಿ, ಉಮೇಶ ಹೊಸಮನಿ, ಸೋಮನಾಥ ಹಳ್ಳಿ ಸೇರಿದಂತೆ ಅನೇಕರು ಇದ್ದರು.
“ನಾನು ಇಂಡಿ ತಾಲೂಕಾ ಕ್ಷೆತ್ರ ಶಿಕ್ಷಣಾಧಿಕಾರಿಯಾಗಿ ಜುಲೈ ೪.ರಂದು ಅಧಿಕಾರ ಸ್ವೀಕರಿಸಿದ್ದು ವಿಕಾಸ ಹೊಸಮನಿರವರ ಅಹವಾಲನ್ನು ಟಪಾಲದೊಳಗೆ ನೀಡಿದ್ದು, ನಾನು ಅದನು ಪರೀಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುದಾಗಿ ಹೇಳಿದ್ದು, ಅಷ್ಟಕ್ಕೇ ಅವರು ನನಗೆ ಆದೇಶ ಮಾಡು ಎಂದರೆ ನಾನು ಹೇಗೆ ಮಾಡುವುದು? ನಾನು ಅವರೊಂದಿಗೆ ಗೌರವದಿಂದ ವರ್ತಿಸಿದ್ದೇನೆ. ಅವರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ನಾನು ಪರೀಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ.”
– ಎಸ್.ಎಸ್.ಮುಜಾವರ
ಕ್ಷೇತ್ರ ಶಿಕ್ಷಣಾಧಿಕಾರಿ, ಇಂಡಿ

