ಇಂಡಿ: ಹಾಲು ಉತ್ಪಾದನೆ ಹಾಗೂ ಶೇಖರಣೆಯಲ್ಲಿ ಪ್ರಥಮ ಸ್ಥಾನ ತಾಲೂಕಿನ ಭತಗುಣಕಿ ಗ್ರಾಮದ ಹಾಲು ಉತ್ಪಾದಕ ಸಂಘಕ್ಕೆ ಸಲ್ಲುತ್ತದೆ ಎಂದು ವಿಜಯಪುರ ಹಾಗೂ ಬಾಗಲಕೋಟ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ದೀಕ್ಷಿತ ಕುಮಾರ್ ಹೇಳಿದರು.
ತಾಲೂಕಿನ ಭತಗುಣಕಿ ಗ್ರಾಮದ ಹಾಲು ಉತ್ಪಾದಕ ಸಂಘದ 2023-24 ನೇ ಸಾಲಿನ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು.
ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸಂಭಾಜಿ ಮಿಸಾಳೆ ಮಾತನಾಡಿ, ಅವರು, 2022/23 ನೇ ಸಾಲಿನಲ್ಲಿ ರೈತರಿಂದ ಸುಮಾರು 8,32,500 ಲೀಟರ್ ಹಾಲು ಶೇಖರಣೆ ಮಾಡಿದ್ದು, ಸಂಘವು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಹಸುಗಳ ಆರೋಗ್ಯ ದೃಷ್ಟಿಯಿಂದ ಸಂಘದ ಸ್ವಂತ ಲಾಭಾಂಶದಲ್ಲಿ ರೈತರಿಗೆ ಪ್ರತಿ ಲೀಟರ್ ಗೆ ₹3 ಹೆಚ್ಚುವರಿಯಾಗಿ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಹಳಕೆ, ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರಾಮ ತಳಕೇರಿ, ಅಪ್ಪಸಾಹೇಬ ಪವಾರ, ಶಿವಪುತ್ರ ಜೇವರಗಿ, ಗಂಗಾಧರ ಘಾಟಗೆ, ಶಿವಾಜಿ ಶಿಂದೆ, ದಶರಥ ಘಾಟಗೆ, ರಹಿಮಸಾವ ಬಾಗವಾನ, ಬಸವರಾಜ ವಾಘಮೋರೆ, ಲಲಿತಾ ಜಾಧವ, ನಾಗುಬಾಯಿ ಕರಾಡೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

