ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹ | ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಶುಭ್ರ ವಸ್ತ್ರದ ಸೀರೆಯೊಂದಿಗಿನ ಅಕ್ಕ ಮಹಾದೇವಿ ಮೂರ್ತಿಯನ್ನು ಸ್ಥಾಪಿಸಲು ಕೋರಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ.ವಿಜಯಾ ಕೋರಿಶೆಟ್ಟಿ ಅವರನ್ನು ಅಭಿನಂದಿಸಿದ ಡಾ.ಶಶಿಕಾಂತ ಪಟ್ಟಣ ಅವರು, ನಿಮ್ಮ ಈ ಸಾಧನೆ ನಮ್ಮೆಲ್ಲರಿಗೂ ಬಹಳ ಸಂತೋಷವನ್ನುಂಟುಮಾಡಿದೆ. ನಿಮ್ಮ ಪರಿಶ್ರಮ ಮತ್ತು ಸಮರ್ಪಣಾ ಭಾವವು ಈ ಯಶಸ್ಸಿಗೆ ಕಾರಣವಾಗಿದೆ. ನಿಮ್ಮ ಮುಂದಿನ ಕಾರ್ಯಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಶುಭಹಾರೈಸಿದ್ದಾರೆ.
ತಮ್ಮ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಲು ಪ್ರಾರ್ಥನೆ.
ಅದೇ ರೀತಿ ನಾಡಿನ ಮೊದಲ ಕವಯಿತ್ರಿ ಶರಣೆ ಅಕ್ಕ ಮಹಾದೇವಿ ಇವರ ಅರೆ ಬೆತ್ತಲೆ ಮೂರ್ತಿಯನ್ನು ತಮ್ಮ ವಿಶ್ವ ವಿದ್ಯಾಲಯದ ಆವರಣದಲ್ಲಿ ತೆರುವಗೊಳಿಸಿ
ಅಲ್ಲಿ ಶುಭ್ರ ವಸ್ತ್ರದ ಸೀರೆಯೊಂದಿಗಿನ ಅಕ್ಕ ಮಹಾದೇವಿ ಮೂರ್ತಿಯನ್ನು ಸ್ಥಾಪಿಸಲು ಭಕ್ತಿಯ ಕೋರಿಕೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಡಾ.ಶಶಿಕಾಂತ ಪಟ್ಟಣ, ಬಸವಣ್ಣನವರು ಇಡೀ ಜಗತ್ತಿನ ಶ್ರೇಷ್ಠ ದಾರ್ಶನಿಕರು ಸಮಾಜ ಸುಧಾರಕರು. ಅವರು ವಿಜಯಪುರ ಜಿಲ್ಲೆಯ ಬಾಗೇವಾಡಿ ಹುಟ್ಟಿದವರು
ಆದರೆ ಅವರ ಹೆಸರಿನಲ್ಲಿ ಬಸವ ಅಧ್ಯಯನ ಪೀಠ ಅಕ್ಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ
ಕಾರಣ ಈ ಕೂಡಲೇ ಕುಲಪತಿಗಳು ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸ ಬೇಕೆಂದು ನಾವು ಒತ್ತಾಯ ಪೂರ್ವಕ ಆಗ್ರಹಿಸುತ್ತೇವೆ.
ಇನ್ನೊಂದು ಅತ್ಯಂತ ನೋವಿನ ವಿಷಯವೆಂದರೆ ಅಕ್ಕ ಮಹಾದೇವಿ ವಿಶ್ವದ ಮೊದಲ ವಿಚಾರವಂತೆ ಕವಯಿತ್ರಿ ಅವಳು ಎಲ್ಲಿಯೂ ಬೆತ್ತಲೆ ಬಂದ ಉಲ್ಲೇಖವಿಲ್ಲ
ಇದು ನಾಗರಿಕ ಸಮಾಜದ ಅವಮಾನ ಕಾರಣ ತಾವು ಅರೆ ಬೆತ್ತಲೆಯ ಅಕ್ಕ ಮಹಾದೇವಿ ಮೂರ್ತಿ ತೆರುವಗೊಳಿಸಿ ಅಲ್ಲಿ ಶ್ವೇತ ವಸ್ತ್ರದ ಸೀರೆಯೊಂದಿಗಿನ ಅಕ್ಕ ಮಹಾದೇವಿ ಮೂರ್ತಿ ನಿಲ್ಲಿಸಲು ಕುಲಪತಿಗಳಿಗೆ ಕಳಕಳಿಯ ಮನವಿ ಮಾಡಿಕೊಂಡಿರುವುದಾಗಿ ಡಾ.ಶಶಿಕಾಂತ ಪಟ್ಟಣ ತಿಳಿಸಿದ್ದಾರೆ.

