ಉದಯರಶ್ಮಿ ದಿನಪತ್ರಿಕೆ
ಚಡಚಣ: ದೇಶದಲ್ಲಿ ಹಲವಾರು ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳ ಆಚರಣೆ ತಮ್ಮದೇಆದ ವಿಶಿಷ್ಟ ರೀತಿಯಿಂದ ನಾವೆಲ್ಲ ಭಾರತೀಯರು ಇಂದಿನವರೆಗೂ ಆಚರಿಸುತ್ತ ಬಂದಿದ್ದಿವೆ.ದೇಶಾಭಿಮಾನ ತೋರುತ್ತಲಿದ್ದೆವೆ. ನಾವೇಲ್ಲರೂ ಒಂದೇ ಕುಟುಂಬದ ಸಹೋದರರಂತೆ ಸಹಬಾಳ್ವೆ ಸಮಾನತೆಯಿಂದ ಹಬ್ಬ ಹರಿದಿನಗಳು ಆಚರಿಸುವ ಮೂಲಕ ನಾವೇಲ್ಲ ಒಂದು ಎಂಬ ಭಾವೈಕ್ಯದ ಸಂಗಮವಾಗಿದೆ.
ಚಡಚಣದಲ್ಲಿ ಪ್ರತಿವರ್ಷದಂತೆ ಈ ವರ್ಷವುಕೂಡ ಅಮವಾಸ್ಯೆಯ ಮಾರನೇದಿನ ಗುದ್ಲಿ ಬಿಳುತ್ತವೆ ಮತ್ತು ಐದನೆ ದಿನ ದೇವರು ಒಂದು ಸ್ಥಳದಲ್ಲಿ ಕೂರಿಸಿ ಪಟ್ಟಣದ ಎಲ್ಲ ಸಮಾಜದವರು ಪೂಜಿಸುತ್ತಾರೆ ಸತತ ೫ ದಿನಗಳವರೆಗೆ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲೀಮ್ ಸಮುದಾಯದ ಜನರೆಲ್ಲರು ಕೂಡಿಕೊಂಡು ವಾದ್ಯ ವೈವಿಧ್ಯ, ಮತ್ತು ಹರಿಕೆಯ ವೇಷದೊಂದಿಗೆ ಕುಣಿದು ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.
ಶನಿವಾರ ಸಣ್ಣ ಕತ್ಲ ಕಾರ್ಯಕ್ರಮ ಜರುಗಿದವು.
ಮೋಹರಂ ಕೊನೆಯದಿನವಾದ ರವಿವಾರ ದೊಡ್ಡ ಕತ್ಲ ಕಾರ್ಯಕ್ರಮ ಜರುಗಿದವು ದೇವರಿಗೆ ಗಂಧ ಮತ್ತು ಹೂ ಏರಿಸುವ ಕಾರ್ಯಕ್ರಮ ಜರಗಿದವು.
ಚಡಚಣದಲ್ಲಿ ಹುಸೇನ್ಬಾಷಾ ಮಕಾನದಾರ ಸಮೀತಿಯವರ ಪಂಜಿ ಸೇರಿದಂತೆ ಒಟ್ಟು ೪ಪಂಜಿಗಳು ಚಡಚಣದಲ್ಲಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಪಟ್ಟಣದ ದಾವಲ್ಮಲೀಕ್ ದೇವರ ಆವರಣದಲ್ಲಿ(ಪಲ್ಲೆದಕಟ್ಟಿ)ತುಪ್ಪದಕಟ್ಟಿಯ ಹತ್ತಿರ ೪ಪಂಜಿಗಳು ಬೇಟಿಯಾದ ದೃಶ್ಯ ದೇವರೆ ಧರೆಗಿಳಿದಿರುವಹಾಗೆ ಭಾಸವಾಯಿತು.
ರವಿವಾರ ದಂದು ಹಣಮಂತ ಬೀರಾದಾರ ಅವರ ತಂಡದಿಂದ ಮತ್ತು ರಾಚಪ್ಪ ಕರಕಂಬಿ ಅವರ ತಂಡದಿಂದ ಕರ್ಬಲ(ರೀವಾಯತ) ಪದಗಳು ಅದ್ಧೋರಿಯಾಗಿ ಜರುಗಿದವು.
ದಿನನಿತ್ಯ ಒಂದಿಲ್ಲಾ ಒಂದು ಕಾರ್ಯಕ್ರಮಗಳು ಜರುಗಿದವು. ರವಿವಾರ ಸಂಜೆ ಎಲ್ಲ ಪಂಜಿಗಳು ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ೪ಪಂಜಿಗಳ ಅಂತಿಮ ಭೇಟಿ ಕಾರ್ಯಕ್ರಮ ರವಿವಾರ ಸಂಜೆಗೆ ಅಗಸಿ ಹತ್ತಿರ ಜರುಗಿದವು.
ಅದಾದನಂತರ ರಾತ್ರಿ ಎಲ್ಲ ಪಂಜಿಗಳು ಕೊನೆಯ ಭೇಟಿಯನ್ನು ಹೊಳೆಯಲ್ಲಿ ಅತಿ ವಿಜೃಂಭಣೆಯಿಂದ ಜರುಗಿದವು.
ಈ ಕಾರ್ಯಕ್ರಮದಲ್ಲಿ ಸತತವಾಗಿ ಐದು ದಿನಗಳವರೆಗೆ ರಫೀಕ ಮಕಾನದಾರ, ಜೋಹರಅಲಿ ಮಕಾನದಾರ, ಇಸಾಕ ನದಾಫ, ಫೀರೋಜ ಅತ್ತಾರ,ಮಾಳಪ್ಪ ವಾಲಿಕಾರ, ಇಸ್ಮಾಯಿಲ್ ನದಾಫ, ದುಂಡಪ್ಪ ಕೋಳಿ,ತೌಫಿಕ ನದಾಫ,ಗುರು ಮಸಳಿ, ಚಡಚಣದ ಭಕ್ತರು ಇದ್ದರು.

