ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಕ್ಕಳಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಮತ್ತು ಅವರ ಪ್ರತಿಭೆ ವಿಶಿಷ್ಟವಾಗಿ ಗುರುತಿಸುವ ಕಾರ್ಯ ಈ ಜಿಲ್ಲಾ ಬಾಲಭವನ ಸೊಸೈಟಿ ಮಾಡುತ್ತದೆ ಇದರ ಉಪಯೋಗ ಮಕ್ಕಳ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಬಾಲಭವನ ಅಧಿಕಾರಿ ಗೀತಾ ಬುಳ್ಳಾ ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ (ರಿ) ಬೆಂಗಳೂರು, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ವಿಜಯಪುರ ಸಹಯೋಗದಲ್ಲಿ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಶನಿವಾರ ಪಟ್ಟಣದ ಕೆಜಿಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಶಿಕ್ಷಕಿ ಕೆ.ಆರ್. ದಾಸರ, ಮಂಜುನಾಥ ತುಂಬರಮಟ್ಟಿ, ಮಾರುತಿ ಪವಾರ, ಜ್ಯೋತಿ ಕೊಟ್ಟಗಿ, ಲಕ್ಷ್ಮಣ ಕುಂಬಾರ, ಹೊನ್ನಪ್ಪ ಹಡಪದ, ಶಕುಂತಲಾ ಚೌಡಪ್ಪನವರ, ಸುಮಾ ಬಗಲಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸೀಪಾ ನದಾಫ್, ಸ್ವಾಗತ ಸಾಕ್ಷಿ ಬುದಿಹಾಳ, ವಂದನಾರ್ಪಣೆ ಕಾವೇರಿ ಬೆಳ್ಳುಬ್ಬಿ ನಡೆಸಿಕೊಟ್ಟರು.
ಸುಮಾರು ನೂರು ಮಕ್ಕಳಿಂದ ವಿವಿಧ ಜಾನಪದ ನೃತ್ಯ ಹಾಗೂ ನಾಟಕ ಪ್ರದರ್ಶನ ಮಾಡಲಾಯಿತು. ಜೊತೆಗೆ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.

