ತಿಕೋಟಾ ನೂತನ ಕಲಾ ಮಹಾವಿದ್ಯಾಲಯದಲ್ಲಿ ಸೇವಾ ವಯೋನಿವೃತ್ತಿ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮನುಷ್ಯನಾದವನು ತನ್ನ ಕೆಲಸ ಕಾರ್ಯದಲ್ಲಿ ಸಹಕಾರ, ಸಹಬಾಳ್ವೆ, ಸಮನ್ವಯತೆ ಹಾಗೂ ಎಲ್ಲರ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿಲಾಸ ಬಗಲಿ ಅವರು ಹೇಳಿದರು.
ಬಿ ಎಲ್ ಡಿ ಇ ಸಂಸ್ಥೆಯ ತಿಕೋಟಾ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಆರ್. ಬಿ. ಸಿರಸಂಗಿ ಹಾಗೂ ಕಚೇರಿಯ ಸಹಾಯಕಿ ಮಲ್ಲಮ್ಮ ವಿಭೂತಿಯವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಬೋಧನಾ ವೃತ್ತಿಯಲ್ಲಿ ಅಳವಡಿಸಿಕೊಂಡ ಅತ್ಯುತ್ತಮ ಕಲಿಕಾ ವಿಧಾನವೇ ಅವರನ್ನು ಜನಪ್ರಿಯಗೊಳಿಸುತ್ತದೆ. ಅಂತವರ ಸಾಲಿನಲ್ಲಿ ಶಿರಸಂಗಿಯವರು ಒಬ್ಬರಾಗಿದ್ದಾರೆ. ಉತ್ತಮ ಶಿಕ್ಷಕರ ಶ್ರೇಷ್ಠ ಗುಣಗಳನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಶಿಕ್ಷಕರಲ್ಲಿ ಪ್ರಾಮಾಣಿಕತೆ, ಆದರ್ಶ, ನಿಷ್ಠೆ, ಹಾಗೂ ದಕ್ಷತೆ ಬಹಳ ಮಹತ್ವದ್ದಾಗಿವೆ. ಒಬ್ಬ ಸಾಮಾನ್ಯ ಶಿಕ್ಷಕ ಜಗತ್ತಿನಲ್ಲಿ ಏನೆಲ್ಲಾ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ನವರು. ಈ ಮಹಾತ್ಮರ ಆದರ್ಶಗಳು ಯಾವತ್ತೂ ಪ್ರಸ್ತುತವೆನಿಸುತ್ತವೆ. ವ್ಯಕ್ತಿ ಜವಾಬ್ದಾರಿಯ ಕೆಲಸ ನಿರ್ವಹಿಸುತ್ತಿರುವಾಗ ಧೈರ್ಯ, ಸ್ಥೈರ್ಯ , ಆತ್ಮವಿಶ್ವಾಸ ಬಹಳ ಮುಖ್ಯವನಿಸುತ್ತದೆ ಎಂದರು. ಪ್ರೊಫೆಸರ್ ಆರ್ ಬಿ ಸಿರಸಂಗಿ ಹಾಗೂ ಮಲ್ಲಮ್ಮ ವಿಭೂತಿಯವರ ವಯೋನಿವೃತ್ತಿ ಜೀವನ ಸುಖವಾಗಿರಲೆಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ಬಿ. ಎಲ್. ಡಿ. ಸಂಸ್ಥೆಯ ವತಿಯಿಂದ ಆಡಳಿತಾಧಿಕಾರಿ ಪ್ರೊ .ವಿಲಾಸ ಬಗಲಿ ಅವರು ಸಿರಸಂಗಿ ದಂಪತಿಗಳನ್ನು ಹಾಗೂ ಮಲ್ಲಮ್ಮ ವಿಭೂತಿಯವರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ನಂತರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಎ.ಬಿ ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಮಾಧ್ಯಮಿಕ ಶಾಲೆಯ ಕನ್ನಡ ಮತ್ತು ಆಂಗ್ಲ ವಿಭಾಗಗಳ ಮುಖ್ಯಸ್ಥರು ಸತ್ಕರಿಸಿದರು.
ಶ್ರೀ ಗಜಾನನ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಎಸ್. ಪಿ. ಪಾಟೀಲ್ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯರಾದ ಎಂ.ಬಿ. ಭಿರಡಿ, ನಿವೃತ್ತ ಪ್ರಾಧ್ಯಾಪಕ ಎಮ್. ಆರ್. ಹೂಗಾರ್ ಅವರು ಮಾತನಾಡಿದರು.
ಸಹ ಪಾಧ್ಯಾಪಕರಾದ ಡಾ. ಎಸ್.ಎನ್. ವಾಘ್ಮೋರೆ, ಡಾ. ರವಿಚಂದ್ರ ವಾಲೀಕಾರ, ಉಪನ್ಯಾಸಕ ಮಂಜುನಾಥ ಕಾಸೆ, ಹಾಗೂ ಹಳೆಯ ವಿದ್ಯಾರ್ಥಿಳಾದ ಮಹಮ್ಮದ್ ಮಕಂದಾರ್, ವೃಷಭನಾಥ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಎ ಬಿ ಜತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ. ಬಿ. ಪಾಟೀಲ, ನೂತನ ಕಲಾ ಮಹಾವಿದ್ಯಾಲಯದ ಸಂಯೋಜಕ ಎಸ್. ಪಿ. ಪಾಟೀಲ, ನಿವೃತ್ತ ಪ್ರಾಂಶುಪಾಲ ಎಸ್. ಪಿ. ಮದರೇಕರ್, ಪ್ರಾಧ್ಯಾಪಕ ತಮ್ಮಣ್ಣ ವೈ, ಎ. ಎಸ್. ಪಿ ಕಾಲೇಜಿನ ಪ್ರಾಂಶುಪಾಲ ಬಿ. ಎಸ್. ಬೆಳಗಲಿ, ಪ್ರೊ ಆರ್. ಎಸ್. ಕೋಟ್ಯಾಳ್, ಶ್ರೀ ಎ. ಬಿ. ಜತ್ತಿ ಪ್ರೌಢಶಾಲೆಯ ಉಪಪ್ರಾಚಾರ್ಯ ಡಿ.ಪಿ. ಬೆಳ್ಳಗಿ, ದೈಹಿಕ ಶಿಕ್ಷಕ ರವಿ ಗೋಖಲೆ, ಕಾಲೇಜಿನ ಸಹ ಪಾಧ್ಯಾಪಕರು, ಉಪನ್ಯಾಸಕರು, ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗ, ಬೋಧಕೇತರ ಸಿಬ್ಬಂದಿ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ಕು.ಭಾಗ್ಯಶ್ರೀ ಜಾದವ್ ಪ್ರಾರ್ಥಿಸಿದರು. ಸಂತೋಷ್ ಹೆಗಡೆ ಸ್ವಾಗತಿಸಿದರು. ನಾಗರಾಜ್ ನರಳೆ ಪ್ರಾಚಾರ್ಯರ ಸೇವಾ ಮಾಹಿತಿಯನ್ನು ಪರಿಚಯಿಸಿದರು. ಡಾ. ಸಂತೋಷ ನವಲಗುಂದ ನಿರೂಪಿಸಿದರು. ಪ್ರೊ ಶಿವಮೂರ್ತಿ ಅವರು ವಂದಿಸಿದರು.

