ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಸಂಘಟನೆ ಬಲಪಡಿಸಿರಿ ಉತ್ತಮ ರೈತಪರ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಹೇಳಿದರು.
ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ ಶನಿವಾರ ನಡೆದ ರಾಜ್ಯ ರೈತ ಸಂಘದ ಘಟಕವನ್ನು ಉಧ್ಘಾಟಿಸಿ ಮಾತನಾಡಿದ ಅವರು, ರೈತರ ಬಗ್ಗೆ ಯಾರಿಗೂ ಯಾವ ಪಕ್ಷಗಳಿಗೂ ಕಾಳಜಿ ಇರುವುದಿಲ್ಲ. ರೈತನನ್ನು ಯಾವ ಸರ್ಕಾರವೂ ಇಲ್ಲಿಯವರೆಗೆ ಉಧ್ಧಾರ ಮಾಡಿಲ್ಲ ಮತ್ತು ಮಾಡುವುದಿಲ್ಲ. ಸರ್ಕಾರ ರೈತರಿಗೆ ನಿರಂತರವಾಗಿ ವಿದ್ಯುತ್, ನೀರು ನೀಡುವಲ್ಲಿ ವಿಫಲವಾಗಿದೆ. ರೈತರು ಬ್ಯಾಂಕ್ನವರ ಮುಂದೆ ಭೀಕ್ಷುಕನಂತೆ ನಿಲ್ಲುವದು ತಪ್ಪಿಲ್ಲ. ರೈತರಿಗೆ ಯಾವುದೇ ಸರ್ಕಾರವಿರಲಿ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಬೇಕು. ಈ ಭಾಗದ ಎಲ್ಲಾ ರೈತರು ಸಂಘಟಿತರಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪಗೌಡ ಮಳಗೊಂಡ, ಸಿದ್ದನಗೌಡ ಬಿರಾದಾರ, ಪ್ರಕಾಶ ಆಲಕುಂಟಿ, ಶಂಕರೇಪ್ಪ ನಾವಿ, ಗುಡುಸಾಬ ಬರಡೋಲ, ಧರೇಪ್ಪ ಕೋಳಿ, ಶರಣಪ್ಪ ಹಡಪದ, ಶಿವಪ್ಪ ಕೋಟಿ, ಶಿವಪ್ಪ ಮಾಳಕೊಟಗಿ, ಭೀಮಾಶಂಕರ ಜಂಗಲಗಿ, ಸಿದ್ದರಾಮ ಗಾಡಿವಡ್ಡರ, ಬೀರಪ್ಪ ಸಲಗರ, ಮೌಲಾಸಾಬ ಸಾತಲಗಾಂವ ಎಲ್ಲ ರೈತ ಸಂಘದ ಸದಸ್ಯರು ಇದ್ದರು.

