ಬರಟಗಿ ಗ್ರಾಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬರಟಗಿ ಗ್ರಾಮದಲ್ಲಿ ತಾಲೂಕು ಪಂಚಾಯತಿ ವತಿಯಿಂದ ಜರುಗಿದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಮಿತಿಯ ತಾಲೂಕು ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ ಮಾತನಾಡಿದರು.
ಸರಕಾರ ಜಾರಿಗೆ ತಂದಿರುವ ಈ ಪಂಚ ಗ್ಯಾರಂಟಿಗಳಿಂದ ಬಡಜನರ ಜೀವನವು ಅತ್ಯಂತ ಸುಖಕರವಾಗಿ ನಡೆಯುತ್ತಿದೆ, ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಕುಟುಂಬಗಳು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದಕ್ಕೆ ಪಂಚ ಗ್ಯಾರಂಟಿಗಳೇ ಕಾರಣ ಎಂದರು.
ನಮ್ಮ ತಾಲೂಕಿನ ಅನುಷ್ಠಾನ ಸಮಿತಿಯು ತುಂಬಾ ಕ್ರೀಯಾಶೀಲವಾಗಿದ್ದು, ಸಮಸ್ಯೆಯನ್ನು ಹೇಳಿಕೊಂಡು ಬರುವ ಫಲಾನುಭವಿಗಳಿಗೆ ಕೇವಲ ೧೫ ನಿಮಿಷದಲ್ಲಿಯೇ ಪರಿಹಾರ ನೀಡುತ್ತಿದ್ದೇವೆ. ಸಮಸ್ಯೆಗಳನ್ನು ವ್ಯಾಟ್ಸಾಫ್ ಮೂಲಕ ಸಲ್ಲಿಸಿದರೂ ಸಹಿತ ೧೫ ನಿಮಿಷದಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳ ಜೊತೆಗೆ ತಾಲೂಕು ಪಂಚಾಯತಿಯ ಎಲ್ಲಾ ಅಧಿಕಾರಿಗಳು ತುಂಬಾ ಸಹಾಯ ಸಹಕಾರ ನೀಡುತ್ತಿದ್ದಾರೆ, ಯೋಜನೆಯ ಯಶಸ್ವಿಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಪಂಚ ಗ್ಯಾರಂಟಿಗಳ ಅನುಷ್ಠಾನ ಇಲಾಖೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿ.ಕೆ.ಹೊಸಮನಿ, ಕೆ.ಎಸ್.ಆರ್.ಟಿ.ಸಿ ಶಿವಾಜಿ ಚವ್ಹಾಣ, ಉದ್ಯೋಗ ವಿನಿಮಯ ಕೇಂದ್ರದ ಎಸ್.ಸಿ.ಆಲಮೇಲ, ವಿಧ್ಯುತ್ ಇಲಾಖೆಯ ಜಿ.ಎಸ್.ದೇಶಮುಖ ಹಾಗೂ ಆಹಾರ ಇಲಾಖೆಯ ಎಮ್.ಎ.ಅಕ್ಕಲಕೋಟ ವರದಿಯನ್ನು ಸಭೆಗೆ ವಿವರಿಸಿದರು.
ಗ್ರಾಪಂ ಸದಸ್ಯರಾದ ದತ್ತಾ ಕಾಟಕರ, ತಾಲೂಕು ಪಂಚಾಯತಿಯ ವಿಷಯ ನಿರ್ವಾಹಕರಾದ ರೀತಾ ಮೌರ್ಯ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಪಂ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗ ಆಯೇಷಾ ಸಾಲೋಟಗಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿ.ಎಸ್.ನಾಯಿಕ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರುಗಳಾದ ಗಂಗುಬಾಯಿ ಮಡದಾನ, ಸಂಜು ಆಯತವಾಡ, ಈರನಗೌಡ ಬಿರಾದಾರ, ಗೈಬುಲಾಲ ಮುಜಾವರ, ತಾಲೂಕು ಪಂಚಾಯತಿಯ ರೀತಾ ಮೌರ್ಯ, ಕಲ್ಲಪ್ಪ ನಂದರಗಿ, ಗ್ರಾಪಂ ಸದಸ್ಯರು & ಸಿಬ್ಬಂದಿ ಸೇರಿ ನೂರಾರು ಫಲಾನುಭವಿಗಳು ಹಾಜರಿದ್ದರು.