ಮಾದಕ ವಸ್ತುಗಳ ಜಾಗ್ರತಿ ಕಾರ್ಯಕ್ರಮ | ಪಿಎಸ್ಐ ಮಂಜುನಾಥ ಪಾಟೀಲ್ ಸಲಹೆ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಇತ್ತೀಚಿನ ದಿನಗಳಲ್ಲಿ ಯುವಕರು ಸಂಚಾರಿ ನಿಯಮ ಪಾಲಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಕಾನೂನು ನಿಯಮಗಳನ್ನು ಪಾಲಿಸುವುದರ ಜೊತೆಗೆ ಮಾದಕ ವಸ್ತುಗಳಿಂದ ದೂರವಿದ್ದು ಪ್ರಾಣ ಉಳಿಸಿಕೊಳ್ಳಿ ಎಂದು ಅಪರಾಧ ವಿಭಾಗದ ಪಿಎಸ್ಐ ಮಂಜುನಾಥ ಪಾಟೀಲ್ ಸಲಹೆ ನೀಡಿದರು.
ಗುರುವಾರ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಸಿಂದಗಿ ಪೊಲೀಸ್ ಠಾಣಾ ವತಿಯಿಂದ ಹಮ್ಮಿಕೊಂಡ ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಕುರಿತು ಜಾಗ್ರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಲ್ಮೆಟ್ ಇಲ್ಲದೆ ಫ್ಯಾಶನ್ ಮಾಡುವ ಹುರುಪಿಲ್ಲಿ ದ್ವಿಚಕ್ರ ವಾಹನ ಮನ ಬಂದಂತೆ ಓಡಿಸುತ್ತಾರೆ ಹಳಿ ತಪ್ಪಿದರೆ ಪ್ರಾಣ ಹೋಗುವುದು ಕಟ್ಟಿಟ್ಟ ಬುತ್ತಿ ಎಲ್ಲರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಅಪಘಾತದಲ್ಲಿ ವಾಹನ ಛಿದ್ರವಾದರೆ ಮತ್ತೊಂದು ವಾಹನ ಖರೀದಿಸಬಹುದು ಒಂದು ಪ್ರಾಣ ಖರೀದಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಪ್ರಾಚಾರ್ಯ ಎ ಬಿ ಸಿಂದಗಿ, ಎಸ್ ಬಿ ಬಿರಾದಾರ, ಪೊಲೀಸ್ ಹೊರಠಾಣೆ ಎಎಸ್ಐ ಎಲ್ ಯು ನದಾಫ್, ಪೇದೆಗಳಾದ ಭೀಮು ಲಮಾಣಿ, ನಿಂಗಣ್ಣ ಪೂಜಾರಿ, ಸೇರಿದಂತೆ ಕಲ್ಪವೃಕ್ಷ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳು ಇದ್ದರು.