ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಣಣದ ವಿದ್ಯಾಭಾರತಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ೫೧೬ ನೇ ಜಯಂತಿ ಆಚರಿಸಲಾಗುತ್ತದೆ.
ನಂತರ ಮಾತನಾಡಿದ ಶಾಲಾ ಅಧ್ಯಕ್ಷ ಕೆ.ಪಿ.ಬೋಳೆಗಾಂವ ಅವರು, ನಮ್ಮ ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ನಾಡಿನ ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ನಾಡನ್ನು ಕಟ್ಟಿ ಆಳಿದ ನಾಡಪ್ರಭು ಕೆಂಪೇಗೌಡರು ಧರ್ಮಪ್ರಭುಗಳೂ ಆಗಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಆರ್,ಎಸ್,ಬಣಗಾರ, ಶಿಕ್ಷಕರಾದ ಎಸ್ ಎಸ್ ಪೂಜಾರಿ, ಬಿ ಎಲ್ ಪೂಜಾರಿ, ಡಿ ಎಸ್ ಬಗಲಿ, ನರೂಣಿ, ಮೆಂಡೆಗಾರ, ಸಿಂಪಿ, ಬಡಿಗೇರ, ಬೀರಾದಾರ, ಶೇಖ, ಉಮರಾಣಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.