ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಷಾಡ ಏಕಾದಶಿಯ ಬೆನ್ನಲೇ ಮಹಾರಾಷ್ಟ್ರದ ಪಂಢರಪುರದಲ್ಲಿ ಜರುಗಲಿರುವ ಜಾತ್ರೆ ನಿಮಿತ್ಯ ಯಾತ್ರಾರ್ಥಿಗಳ ಅನಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ವಿಭಾಗ ವತಿಯಿಂದ ಜುಲೈ ೦೭ ರಿಂದ ಜುಲೈ ೦೮ರವರೆಗೆ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಿವೆ.
ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ ಹಾಗೂ ಬಸವನ ಬಾಗೇವಾಡಿ ಘಟಕ ಕೇಂದ್ರ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ ಮಾಡಲಿದ್ದು, ಒಂದೇ ಗುಂಪಿನಲ್ಲಿ ೪೭ ಯಾತ್ರಾರ್ಥಿಗಳು ಲಭ್ಯವಾದಲ್ಲಿ ಅವರ ಸ್ಥಳದಿಂದ ಪಂಢರಪುರಕ್ಕೆ ನೇರವಾಗಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿಗಳ ಮೊ.ಸಂ: ೭೭೬೦೯೯೨೨೫೨, ವಿಜಯಪುರ -೧ರ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೩, ವಿಜಯಪುರ -೨ರ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೪, ಇಂಡಿ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೫, ಸಿಂದಗಿ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೭, ಬಸವನ ಬಾಗೇವಾಡಿ ಘಟಕ ವ್ಯವಸ್ಥಾಪಕರ ಮೊ.ಸಂ:೭೭೬೦೯೯೨೨೬೯, ವಿಜಯಪುರ ಕೇಂದ್ರ ಬಸ್ ನಿಲ್ದಾಣ ದೂರವಾಣಿ ಸಂ: ೦೮೩೫೨- ೨೫೧೩೪೪ ಹಾಗೂ ಮೊ.ಸಂ: ೭೭೬೦೯೯೨೨೫೮ಗೆ ಸಂಪರ್ಕಿಸಬಹುದಾಗಿದೆ ಎಂದು
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.