ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಜಯಂತಿಯಂಗವಾಗಿ ಕೆಂಪೇಗೌಡ ಅವರ ಭಾವಚಿತ್ರಕ್ಕೆ ಶಿರಸ್ತೇದಾರ ಬಿ.ಆರ್.ಪೊಲೇಶಿ ಅವರು ಪೂಜೆ ನೆರವೇರಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ವಿಲಾಸ ಜಾಡರ, ರಿಶಿಕೇಶ ಇಂಗಳೆ, ಪ್ರಸನ್ನ ಕಡಿಜಾಡರ, ಪ್ರವೀಣ ಲಮಾಣಿ, ಆರತಿ ತೆನಹಳ್ಳಿ, ಅನ್ನಪೂರ್ಣ ಪಾಟೀಲ, ಪುರಸಭೆ ಸದಸ್ಯ ಪ್ರವೀಣ ಪೂಜಾರಿ ಇತರರು ಇದ್ದರು.