ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಡಿತರ ಅಕ್ಕಿ ಅಕ್ರಮ ಮಾರಾಟ ಸರಬರಾಜು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಈಗಾಗಲೇ ಅನೇಕರ ಮೇಲೆ ಪ್ರಕರಣ ದಾಖಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ದಲ್ಲಾಳಿಗಳಿಗೆ ಮಾರಾಟ ಮಾಡುವವರನ್ನು ಗುರುತಿಸಿ ಅವರ ಕಾರ್ಡನ್ನು ರದ್ದತಿ ಪಟ್ಟಿಯಲ್ಲಿ ಸೇರಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೊರಾಮಣಿ ಹೇಳಿದರು.
ಸಿಂದಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಿಂದ ಬೆಂಗಳೂರು, ಹಾಸನ, ಮೈಸೂರು ಸೇರಿದಂತೆ ಇನ್ನುಳಿದ ಪ್ರದೇಶಗಳಿಗೆ ಜನ ಇಟ್ಟಿಗೆ ಬಟ್ಟಿಯ ಕೆಲಸಕ್ಕಾಗಿ ಗುಳೆ ಹೋಗುವುದು ಹೆಚ್ಚಾಗಿದೆ. ಜನರಲ್ಲಿ ಮಾಹಿತಿಯಿಲ್ಲದ ಕಾರಣ ಕೆವೈಸಿ ಮಾಡಿಕೊಳ್ಳದೆ ಪಡಿತರ ಕಾರ್ಡಯಿಂದ ವಂಚಿತರಾಗುತ್ತಿದ್ದು,ಅದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.
ಇಂದಿನ ಸಮಯದಲ್ಲಿ ಇಂಡಿ ಮತ್ತು ಸಿಂದಗಿ ಭಾಗದಲ್ಲಿ ಅಕ್ಕಿ ಮಾಫಿಯಾ ಮೀತಿ ಮೀರಿದೆ. ಇಂಡಿ ತಾಲ್ಲೂಕಿನಲ್ಲಿಯೇ ೩೩ ಪ್ರಕರಣ ದಾಖಲಿಸಲಾಗಿದೆ. ಸಿಂದಗಿಯಲ್ಲಿ ಒಂದು ಪ್ರಕರಣ ದಾಖಲಾಗಿಲ್ಲ. ಅಂದರೆ ಇಲ್ಲಿ ಅಕ್ಕಿ ಮಾಫಿಯಾ ಇಲ್ಲವಾ? ಒಂದು ಗಮನದಲ್ಲಿರಲ್ಲಿ ನಮ್ಮ ಭಾಗದಲ್ಲಿ ಮರಳು ಮಾಪಿಯಾಗಿಂತಲೂ ಅಕ್ಕಿ ಮಾಫಿಯಾ ಜೋರಾಗಿದೆ. ಅದನ್ನು ತೆಡೆಗಟ್ಟಲು ಆಹಾರ ಅಧಿಕಾರಿಗಳಿಗೆ ಅಥವಾ ನನ್ನ ೯೯೮೬೯೩೦೦೬೪ ದೂರವಾಣಿ ಮೂಲಕ ಮಾಹಿತಿ ಒದಗಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಗೃಹಲಕ್ಷ್ಮೀ ವರದಿ ನೀಡಿದ ಸಿಡಿಪಿಒ ಶಂಭುಲಿಂಗ ಹಿರೇಮಠ, ಸಿಂದಗಿ ಮತ್ತು ಆಲಮೇಲ ಭಾಗದ ವರದಿ ನೀಡಿದ ಅವರು ೫೮,೮೨೨ ಪಲಾನುಭವಿಗಳಿಗೆ ೨,೨೩,೫೨,೩೬,೦೦೦ ಅಗಸ್ಟ್ ೨೦೨೩ ರಿಂದ ಮೇ ೨೦೨೫ರವರೆಗೆ ಒಟ್ಟು ೨೦ಕಂತ ಜಮಾ ಮಾಡಲಾಗಿದೆ ಎಂದು ಹೇಳಿದರು. ಅದೇ ರೀತಿ ಸಾರಿಗೆ ಇಲಾಖೆ, ಯುವನಿಧಿಗೆ ಸಂಬಂದಿಸಿದ ಮಾಹಿತಿಯನ್ನು ಅಧಿಕಾರಿಗಳು ವಿವರಿಸಿದರು.
ಈ ವೇಳೆ ಸದಸ್ಯ ಸಿದ್ಧಲಿಂಗ ಗುಂಡಾಪುರ ಮಾತನಾಡಿ, ಬಸ್ ಚಾಲಕರು ಮತ್ತು ನಿರ್ವಾಹಕರು ಮಹಿಳೆಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇವರ ನಿರ್ಲಕ್ಷ್ಯ ದಿಂದ ಒರ್ವ ಮಹಿಳೆ ಬಸ್ಯಿಂದ ಬಿದ್ದಿರುವ ಘಟನೆ ಇತ್ತೀಚಗಷ್ಟೆ ನಡೆದಿದೆ. ಇದರ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಇಲಿಯಾಸ್ ಸೂಚಿಸಿದರು.
ಈ ವೇಳೆ ತಾಪಂ ಇಒ ರಾಮು ಅಗ್ನಿ, ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ, ಸದಸ್ಯರಾದ ಸಾಹೇಬಪಟೇಲ ಅವಟಿ, ರಜತ್ ತಾಂಬೆ, ಸುನಂದಾ ಯಂಪೂರೆ, ಪರಸು ಉಪ್ಪಾರ, ರುದ್ರಗೌಡ ಪಾಟೀಲ, ಎಸ್.ಬಿ.ಖಾನಾಪೂರ, ಸಿದ್ದಲಿಂಗ ಗುಂಡಾಪುರ, ಭೀಮರಾಯ ಚೌಧರಿ ಸೇರಿದಂತೆ ಅನೇಕರು ಇದ್ದರು.