ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೧೫೦೯ರಲ್ಲಿ ವಿಜಯನಗರದ ಸಿಂಹಾಸನವೆರಿದ್ದ ಶ್ರೀ ಕೃಷ್ಣದೇವರಾಯರು ಹಲವಾರು ಯುದ್ಧಗಳಲ್ಲಿ ಜಯಗಳಿಸಿ ತಮ್ಮ ಸೈನ್ಯದ ಅಸಾಧಾರಣ ಸಾಮರ್ಥ್ಯ ಹಾಗೂ ವಿಜಯನಗರದ ಸಾಮ್ರಾಜ್ಯದ ವೈಭೋಗವನ್ನು ಅನಾವರಣ ಮಾಡಲೆಂದು ೧೫೧೫ರಲ್ಲಿ ರಾಜಧಾನಿ ಹಂಪಿಯಲ್ಲಿ ಪ್ರಥಮ ಬಾರಿಗೆ ವಿಜಯ ದಶಮಿ ಉತ್ಸವವನ್ನು ಆರಂಭಿಸಿದರು ಎಂದು ನಿವೃತ್ತ ಪ್ರಾಚಾರ್ಯ ಬಿ.ಎಂ.ಬಿರಾದಾರ ಹೇಳಿದರು.
ಸಿಂದಗಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿರು.
ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಶಿರಸ್ತೇದಾರ ಆರ್.ಪಿ.ಜೋಷಿ, ಸಿಬ್ಬಂದಿಗಳಾದ ಗಂಗಾಧರ ಸೋಮನಾಯಕ, ಗಗನ ಕುಲಕರ್ಣಿ, ಮಲ್ಲು ಮಾಲಗಾರ, ಸಾಗರ ಪಾಟೀಲ, ಕೀರ್ತಿ ಅಗ್ನಿಹೊತ್ರಿ, ವಿದ್ಯಾ ಹಿಪ್ಪರಗಿ, ಹೀನಾ ಸರಿನಾ ಮಂದೇವಾಲಿ, ವಿಜಯಲಕ್ಷ್ಮಿ, ಗುರುನಾಥ ರೆಡ್ಡಿ, ಸಂತೋಷ ವಾಲೀಕಾರ ಸೇರಿದಂತೆ ಇತರರು ಇದ್ದರು.