ಮಾದಕ ವಸ್ತುಗಳ ದುರುಪಯೋಗ & ಸಾಗಣೆ ವಿರುದ್ದ ಜಾಗೃತಿ ಜಾಥಾ | ಪಿಎಸೈ ಅರವಿಂದ ಅಂಗಡಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಣೆ ವಿರುದ್ದ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು ಕಾರ್ಯಕ್ರಮ ಜರುಗಿತು.
ಗುರುವಾರ ಶಾಲಾ ಮಕ್ಕಳೊಂದಿಗೆ ಆಲಮೇಲ ಪಿಎಸ್ಐ ಅರವಿಂದ ಅಂಗಡಿ ನೇತೃತ್ವದಲ್ಲಿ ಮಾದಕ ವಸ್ತುಗಳ ಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಪಟ್ಟಣದ ಪ್ರಮುಕ ಬಿದಿಗಳಲ್ಲಿ ಸಂಚರಿಸಿ ಗೋಷಣೆಗಳನ್ನು ಕೂಗುತ್ತ ಮಾದಕ ವಸ್ತುಗಳ ದುರುಪಯೋಗದ ಜಾಗೃತಿ ಜಾತ ಅಭಿಯಾನ ಮಾಡಿದರು.
ನಂತರ ಪಿಎಸೈ ಅರವಿಂದ ಅಂಗಡಿ ಮಾತನಾಡಿ, ಎಲ್ಲೆಡೆ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಪರಾದ ಕೃತ್ಯಗಳು ಹೆಚ್ಚಾಗಿದ್ದು ಅದನ್ನು ತಡೆಗಟ್ಟಲು ಸಾರ್ವಜನಿಕರು, ವಿದ್ಯಾರ್ಥಿಗಳು ಜಾಗ್ರತರಾಗಿ ಪೊಲೀಸ್ರೊಂದಿಗೆ ಸಹಕರಿಸಬೇಕು. ಯಾರಾದರು ಮಾದಕ ವಸ್ತುಗಳ ಸೇವನೆ ಮಾಡುವದು ಮತ್ತು ಬೇರೆಡೆ ಸಾಗಣೆ ಮಾಡುವದು ಕಂಡು ಬಂದರೆ ಪೊಲೀಸ್ರಿಗೆ ಮಾಹಿತಿ ನೀಡಿದರೆ ಅದನ್ನು ತಡೆಗಟ್ಟಲು ಸಾದ್ಯವಾಗುತ್ತದೆ ಎಂದರು.
ತಂತ್ರಜ್ಞಾನ ಹೆಚ್ಚಾದಂತೆ ಅಪರಾದ ಕೃತ್ಯಗಳು ಹೆಚ್ಚಾಗಿದ್ದು ಅದರ ಬಗ್ಗೆ ಸಾರ್ವಜನಿಕರು ಜಾಗ್ರತರಾಗಿರಬೇಕು. ಸೈಬರ ಅಪರಾದ, ರಸ್ತೆ ಸುರಕ್ಷತೆ, ಬಾಲ್ಯ ವಿವಾಹ, ಲೈಂಗಿಕ ಕಿರುಕುಳ, ಮಕ್ಕಳ ಕಳ್ಳ ಸಾಗಣೆ, ಬೆಟ್ಟಿಂಗ್, ಜೂಜು ಸೇರಿದಂತೆ ಅನೇಕ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದ್ದು ಅದಕ್ಕೆ ಸಾರ್ವಜನಿಕರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹಕಾರ ನೀಡಿದರೆ ಪೊಲೀಸ್ರು ಎಲ್ಲ ರೀತಿಯ ಅಪರಾದ ಕೃತ್ಯಗಳು ತಡೆಗಟ್ಟುವದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಹೇಳಿದರು.
ಸಿಬ್ಬಂದಿ ಸಿದ್ರಾಯ ಪಾಟೀಲ, ಸಲವೇಶ ಕಾನಡೆ, ಪಟ್ಟಣದ ಎಲ್ಲ ಸರ್ಕಾರಿ ಶಾಲಾ ಮಕ್ಕಳು, ಶಿಕ್ಷಕರು ಜಾಗೃತಿ ಜಾತಾದಲ್ಲಿ ಪಾಲ್ಗೊಂಡಿದ್ದರು.