ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುರೇಶ ನಾಯಕ ನೇತೃತ್ವದಲ್ಲಿ ತೆರಿಗೆ ವಸೂಲಾತಿ ಅಭಿಯಾನ ಜರುಗಿತು.
ಗುರುವಾರ ಪಟ್ಟಣ ಪಂಚಾಯಿತಿ ವತಿಯಿಂದ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತು ಮನೆ ಮನೆಗಳಿಗೆ ತೆರಳಿ ತೆರಿಗೆ ತುಂಬುವAತೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.
ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಸರ್ಕಾರ ಕಳೆದ ಮೂರು ತಿಂಗಳಿಂದ ಸ್ವಯಂ ಪ್ರೇರಣೆಯಿಂದ ಪ್ರತಿ ವರ್ಷ ತೆರಿಗೆ ತುಂಬುವರಿಗೆ ಶೇ.೫% ರಿಯಾಯಿತಿ ನೀಡಿದ್ದು ಅದು ಇದೆ ತಿಂಗಳು ೩೧ ರಂದು ಮುಕ್ತಾಯಗೊಳ್ಳುವದು ಆಲಮೇಲ ಪಟ್ಟಣದ ಜನತೆ ಸರ್ಕಾರದ ರಿಯಾಯಿತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಒಂದು ವೇಳೆ ಜೂನ್ ೩೧ರ ವರೆಗೆ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಕಟ್ಟಡ ಪರವಾನಿಗೆ, ಉದ್ಯಮೆ ಪರವಾನಿಗೆ ಪಡೆದುಕೊಳ್ಳದೆ ಇದ್ದರೆ ಹೆಚ್ಚುವರಿ ದಂಡ ವಿಧಿಸಲಾಗುವದು ಎಂದು ಹೇಳಿದರು.
ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಪಟ್ಟಣದ ಜನರು ಸರ್ಕಾರದ ರಿಯಾಯಿತಿ ಸದುಪಯೋಗ ಪಡೆದುಕೊಂಡು ಸ್ವಯಂ ಪ್ರೇರಣೆಯಿಂದ ತೆರಿಗೆ ತುಂಬುತ್ತಿದ್ದರೆ ಎಲ್ಲ ರೀತಿಯ ಮೂಲಭೂತ ಸೌಲಬ್ಯ ವದಗಿಸಲು ಸಾದ್ಯವಾಗುತ್ತದೆ. ಕಡ್ಡಾಯವಾಗಿ ಎಲ್ಲರು ಸ್ವಯಂ ಪ್ರೇರಣೆಯಿಂದ ತೆರಿಗೆ ತುಂಬಿ ಪಟ್ಟಣದ ಅಭಿವೃದ್ದಿಗೆ ಸಹಕರಿಸಿ ಎಂದು ಹೇಳಿದರು.
ಸಿಬ್ಬಂದಿಗಳಾದ ಲಾಲಸಾಬ ದೇವರಮನಿ, ಅಜರ ನಾಟೀಕಾರ, ಆರೋಗ್ಯ ನಿರಿಕ್ಷಕಿ ತೇಜಶ್ವಿನಿ ಮಗಿ, ಶ್ರೀಶೈಲ ಭೋವಿ, ಸಂತೋಷ ಜರಕರ, ಶಿವು ರಜಪೂತ, ಶಿವರಾಜ ರಜಪೂತ ಹಾಗೂ ಪೌರ ಕಾರ್ಮಿಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.