ಚಡಚಣ:ವೃತ್ತಿಯಲ್ಲಿ ಅತ್ಯಂತ ಪವಿತ್ರ, ಶ್ರೇಷ್ಠ ವೃತ್ತಿ ಅಂತಹ ವೃತ್ತಿಯಲ್ಲಿ ರಾಜಾರಾಮ ಎಸ್.ಪಾಟೀಲ ಅವರ ಕೊಡುಗೆ ಅಪಾರವಾದದ್ದು ಎಂದು ಉಪನ್ಯಾಸಕ ಮಲಿಕ್ ಎಲ್ ಜಮಾದಾರ ಹೇಳಿದರು.
ಸಮೀಪದ ಧುಮಕನಾಳ ಗ್ರಾಮದ ಶಿಕ್ಷಕ ರಾಜಾರಾಮ್ ಶ್ರೀ ಪಾಟೀಲ ಇವರು ಹಡಲಸಂಗ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಕ ವೃತ್ತಿ ಪೂರೈಸಿ ನಿವೃತ್ತಿಹೊಂದಿದ ಹಿನ್ನೆಲೆ ಸನ್ಮಾನಿಸಿ, ಗೌರವಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕರು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ. ಶಿಕ್ಷಕನು ಶೈಕ್ಷಣಿಕ ಜ್ಞಾನ, ನೈತಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ನಮ್ಮ ವ್ಯಕ್ತಿತ್ವವನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸಲು ಸಹಾಯ ಮಾಡುವ ನೈತಿಕ ಮೌಲ್ಯಗಳನ್ನು ಸಂಯೋಜಿಸುತ್ತಾರೆ.ಅಂತಹ ಶಿಕ್ಷಕ ವೃತ್ತಿಯಲ್ಲಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ ಅವರು ನಮಗೆ ಎಂದೆಂದಿಗೂ ಮಾರ್ಗದರ್ಶಕರಾಗಿದ್ದಾರೆ.ನನ್ನ ವೃತ್ತಿಯಲ್ಲಿ ಅವರ ನೀಡಿರುವ ಸಲಹೆ ಸೂಚನೆಗಳನ್ನು ಕರಗತವಾಗಿವೆ ಎಂದು ಹೇಳಿದರು.
ಈ ವೇಳೆಯಲ್ಲಿ ನಿವೃತ್ತ ಶಿಕ್ಷಕ ರಾಜಾರಾಮ ಶ್ರೀ.ಪಾಟೀಲ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರ, ಶ್ರೇಷ್ಠವಾಗಿರುವಂಥದ್ದು ಶಿಕ್ಷಕರು ಉತ್ತಮ ನೈತಿಕ ಮೌಲ್ಯಗಳನ್ನು ಹೊಂದಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಕಲಿಸಬೇಕು.ಶಿಕ್ಷಕರು ತಮ್ಮ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ಆಸಕ್ತಿಯಿಂದ ಬೋಧಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಆಸಕ್ತಿ ಮೂಡುತ್ತದೆ,ಕಲಿಕೆಗೆ ಪ್ರೇರೇಪಿಸುತ್ತದೆ ಎಂದು ಹೇಳಿದರು.ವೃತ್ತಿಯಲ್ಲಿ ಸತ್ಯ,ನಿಷ್ಠೆ ಯಿಂದ ,ಪ್ರಾಮಾಣಿಕ,ಪರಿಣಾಮಕಾರಿಯಾಗಿ ಕಾರ್ಯನಿರ್ವಸಬೇಕು ಅಂದಾಗ ಆ ಆವೃತ್ತಿಗೆ ಒಂದು ಘನತೆ, ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅವರ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಗ್ರಾಮಸ್ಥರಾದ ಲಾಲಸಾಬ ಜಮಾದಾರ ಮಾತನಾಡಿ ನಮ್ಮೂರಿನ ಶಿಕ್ಷಕರು ಅದ್ಯಾತ್ಮಿ ಜೀವಿಗಳು ವೃತ್ತಿಯೊಂದಿಗೆ ಅಧ್ಯಾತ್ಮವು ಪ್ರವತ್ತಿಯಾಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ.ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ವೇಳೆಯಲ್ಲಿ ಗಿರಮಲಗೌಡ ರಾ. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಬಂದೇನವಾಜ ಜಮಾದಾರ,ಸಾತಲಗಾಂವ ಗ್ರಾಮಸ್ಥರು,ಊರಿನ ಹಿರಿಯರು, ಉಪಸ್ಥಿತಿರಿದ್ದರು.
Subscribe to Updates
Get the latest creative news from FooBar about art, design and business.
ಶಿಕ್ಷಣ ಕ್ಷೇತ್ರಕ್ಕೆ ನೀವೃತ್ತ ಶಿಕ್ಷಕ ರಾಜಾರಾಮ ಎಸ್.ಪಾಟೀಲ ಅವರ ಕೊಡುಗೆ ಅಪಾರ
Related Posts
Add A Comment