ವಿಶ್ವ ಹಿಂದೂ ಪರಿಷತ್ ಆಯೋಜನೆ | ಸೆ.೩೦ ರಿಂದ ಅ.೧೬ ವರೆಗೆ ಶೌರ್ಯ ಜಾಗರಣ ರಥಯಾತ್ರೆ
ಮುದ್ದೇಬಿಹಾಳ: ವಿಶ್ವ ಹಿಂದೂ ಪರಿಷದ್ ೬೦ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ ರಾಷ್ಟçದಾದ್ಯಂತ ಸೆ.೩೦ ರಿಂದ ಅ.೧೬ ರವರೆಗೆ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬ ಹಿಂದುವೂ ಕೈಜೋಡಿಸಿ ತನು ಮನದಿಂದ ಭಾಗವಹಿಸುವಂತೆ ಪರಿಷದ್ ನ ಬೆಳಗಾವಿ ಮಠ ಮಂದಿರಗಳ ಪ್ರಮುಖ ಶ್ರೀಮಂತ ದುದ್ದಗಿ ವಿನಂತಿಸಿದರು.
ಪಟ್ಟಣದ ಬಜಾರ ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ರಾಷ್ಟçದ ಮೇಲೆ ಪರಕೀಯರ ಆಕ್ರಮಣಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ, ಸಮರ್ಪಕವಾಗಿ ಎದುರಿಸುತ್ತ ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತ ಭೂಮಿಯನ್ನು ಸಂರಕ್ಷಿಸುವಲ್ಲಿ ಸಾವಿರಾರು ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿ, ಅವಶ್ಯ ಬಂದಾಗ ಬಲಿದಾನವೂ ಆಗಿ ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರ ತ್ಯಾಗ ಬಲಿದಾನಗಳ ಪರಿಣಾಮವಾಗಿ ನಮ್ಮ ಸನಾತನ ಧರ್ಮವು ಸುರಕ್ಷಿತವಾಗಿ ನಮ್ಮ ಕಾಲಖಂಡದವರೆಗೆ ತಲುಪಿದ್ದು, ಇದನ್ನು ಸಂರಕ್ಷಿಸುವ ಹೊಣೆ ಪ್ರತಿಯೊಬ್ಬ ಹಿಂದುವಿನ ಮೇಲಿದೆ ಎಂದರು.
ತಾಲೂಕು ಅಧ್ಯಕ್ಷ ಶಿವಯೋಗಪ್ಪ ರಾಪೂರ, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಮಾತನಾಡಿ, ರಥಯಾತ್ರೆ ಕರ್ನಾಟಕ ಉತ್ತರ ಪ್ರಾಂತದಲ್ಲಿ ಏಳು ರಥಗಳಾಗಿ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಾದುಹೋಗುವಂತೆ ಆಯೋಜಿಸಲಾಗಿದ್ದು ಕಲಬುರ್ಗಿ, ಮಾನವಿ, ಶಿರಸಿ, ವಿಜಯಪುರ, ಬೆಳಗಾವಿ ಮತ್ತು ಹುಬ್ಬಳ್ಗಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ತಾಲೂಕು ಉಪಾಧ್ಯಕ್ಷ ವಿಜಯಕುಮಾರ ನಾಯಕ, ಏಕನಾಥ್ ಗೆದ್ದಲಮರಿ, ರಾಜು ರಾಯಗುಂಡ, ಸಂಜು ಬಾಗೇವಾಡಿ, ಗುರುಸ್ವಾಮಿ ತಂಗಡಗಿ, ಗಿರಣಿ ಗೌಡಪ್ಪ, ಶರಣು ಸಜ್ಜನ, ವಿರೇಶ ಢವಳಗಿ, ಅಶೋಕ ರಾಠೋಡ, ಸಾಯಿನಾಥ ಕುಂಬಾರ, ಜಗದೀಶ ಪಂಪಣ್ಣವರ ಸೇರಿದಂತೆ ಮತ್ತೀತರರು ಇದ್ದರು.