ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪುಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ತಾಲ್ಲೂಕುವಾರು ಹಾಗೂ ಗ್ರಾಮ ಪಂಚಾಯಿತಿವಾರು ಅಧಿಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ ವಿಮಾ ಕಂತು ಮತ್ತು ನೋಂದಣಿಯ ಅಂತಿಮ ದಿನಾಂಕದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಲು ವಿನಂತಿಸಲಾಗಿದೆ. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು, ಸಾಲ ನೀಡಿದ ಬ್ಯಾಂಕ್ ಗಳಲ್ಲಿ ವಿಮೆ ನೋಂದಾಯಿಸಬೇಕು ಎಂದವರು ತಿಳಿಸಿದ್ದಾರೆ. ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ರೈತರು ಕೃಷಿ ಸಾಲ ಪಡೆಯದಿರುವ ಕುರಿತು ಕಡ್ಡಾಯವಾಗಿ ಸ್ವಯಂ ಘೋಷಣೆ ಪತ್ರ ಹಾಗೂ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ ಬುಕ್ ಮತ್ತು ಆಧಾರದ ಸಂಖ್ಯೆಯೊಂದಿಗೆ ಗ್ರಾಮ್ ಓನ್ ಮತ್ತು ಸಿಎಸ್ ಸಿ ಕೇಂದ್ರಗಳಿಗೆ ಸಂಪರ್ಕಿಸಬೇಕು ಎಂದವರು ತಿಳಿಸಿದ್ದಾರೆ.
ಅಧಿಸೂಚಿಸಿದ ಬೆಳೆಗಳ ವಿವರ: ಪ್ರತಿ ಎಕರೆ ಮಳೆಯಾಶ್ರಿತ ಉದ್ದು ಬೆಳೆಗೆ ೧೫೫೨೦ ರೂ. ವಿಮಾ ಮೊತ್ತ ಹಾಗೂ ೩೧೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೧೫ ಕೊನೆ ದಿನ. ಪ್ರತಿ ಎಕರೆ ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ ೧೯೨೮೦ ರೂ. ವಿಮಾ ಮೊತ್ತ ಹಾಗೂ ೩೮೫ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ಮಳೆಯಾಶ್ರಿತ ಹೆಸರು ಬೆಳೆಗೆ ೧೫೮೮೦ ರೂ. ವಿಮಾ ಮೊತ್ತ ಹಾಗೂ ೩೧೭ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೧೫ ಕೊನೆ ದಿನವಾಗಿದೆ. ಪ್ರತಿ ಎಕರೆ ಮಳೆಯಾಶ್ರಿತ ಸಜ್ಜೆ ಬೆಳೆಗೆ ೧೩೯೨೦ ರೂ. ವಿಮಾ ಮೊತ್ತ ಹಾಗೂ ೨೭೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಸಜ್ಜೆಗೆ ೧೭೩೨೦ ರೂ. ವಿಮಾ ಮೊತ್ತ ಹಾಗೂ ೩೪೬.೪ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಸೂರ್ಯಕಾಂತಿಗೆ ೨೩೧೬೦ ರೂ. ವಿಮಾ ಮೊತ್ತ ಹಾಗೂ ೪೬೩ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು.೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ನೆಲಗಡಲೆ (ಶೇಂಗಾ) ಬೆಳೆಗೆ ೩೧೧೨೦ ವಿಮಾ ಮೊತ್ತ ಹಾಗೂ ೬೨೨ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಟೊಮೆಟೊ ಬೆಳೆಗೆ ೬೭೯೨೦ ರೂ. ವಿಮಾ ಮೊತ್ತ ಹಾಗೂ ೩೩೯೬ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ. ಪ್ರತಿ ಎಕರೆ ನೀರಾವರಿ ಮುಸುಕಿನಜೋಳಕ್ಕೆ ೬೭೯೨೦ ವಿಮಾ ಮೊತ್ತ ಹಾಗೂ ೩೩೯೬ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ಮಳೆಯಾಶ್ರಿತ ಮುಸುಕಿನಜೋಳಕ್ಕೆ ೨೭೦೦೦ ವಿಮಾ ಮೊತ್ತ ಹಾಗೂ ೫೪೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ. ೧೪ ಕೊನೆ ದಿನವಾಗಿದೆ. ಪ್ರತಿ ಎಕರೆ ನೀರಾವರಿ ಈರುಳ್ಳಿ ಬೆಳೆಗೆ ೩೭೫೬೦ ವಿಮಾ ಮೊತ್ತ ಹಾಗೂ ೧೮೭೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ನೀರಾವರಿ ತೊಗರಿಗೆ ೨೪೧೨೦ ವಿಮಾ ಮೊತ್ತ ಹಾಗೂ ೪೮೨ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ಮಳೆಯಾಶ್ರಿತ ತೊಗರಿಗೆ ೨೩೦೪೦ ವಿಮಾ ಮೊತ್ತ ಹಾಗೂ
೪೬೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ. ೧೪ ಕೊನೆ ದಿನವಾಗಿದೆ. ಪ್ರತಿ ಎಕರೆ ಮಳೆಯಾಶ್ರಿತ ಹತ್ತಿಗೆ ೨೩೮೮೦ ರೂ. ವಿಮಾ ಮೊತ್ತ ಹಾಗೂ ೧೧೯೪ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ.೧೪ ಕೊನೆ ದಿನವಾಗಿದೆ.ಪ್ರತಿ ಎಕರೆ ನೀರಾವರಿ ಹತ್ತಿಗೆ ೩೪೫೬೦ ರೂ. ವಿಮಾ ಮೊತ್ತ ಹಾಗೂ ೧೭೨೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ನೀರಾವರಿ ಮೆಣಸಿನಕಾಯಿಗೆ ೪೯೮೦೦ ವಿಮಾ ಮೊತ್ತ ಹಾಗೂ ೨೪೯೦ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ.
ಪ್ರತಿ ಎಕರೆ ಮಳೆಯಾಶ್ರಿತ ಹುರುಳಿಗೆ ೯೪೦೦ ವಿಮಾ ಮೊತ್ತ ಹಾಗೂ ೧೮೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನೋಂದಣಿಗಾಗಿ ರೈತರು ಕಡ್ಡಾಯವಾಗಿ ಎಫ್ ಐಡಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

