ಲೇಖನ
– ಪರಶುರಾಮ ಮಡಿವಾಳರ
ನಿವೃತ್ತ ಉಪನ್ಯಾಸಕರು
ಸಿಂದಗಿ
ಮೊ:೯೬೦೬೫೬೨೪೮೮
ಉದಯರಶ್ಮಿ ದಿನಪತ್ರಿಕೆ
ವಿದ್ಯಾರ್ಥಿಗಳ ಬಾಳಿನಲ್ಲಿ ಮುಂಬರುವ ಪರೀಕ್ಷಾ ದಿನಗಳು ತಮ್ಮ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟ, ಲಕ್ಷ ಲಕ್ಷ ವಿದ್ಯಾರ್ಥಿಗಳ ಬುದ್ಧಿ ಸಾಮರ್ಥ್ಯವನ್ನು ಅಳೆಯಲು ಪರೀಕ್ಷೆ ಎಂಬ ಸಾಧನ ಅದ್ಭುತವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವದೆಂದರೆ ಅದು ಸರ್ಕಾರಕ್ಕೆ ಸವಾಲೇ ಸರಿ. ವಿದ್ಯಾರ್ಥಿಗಳು ಹಗಲಿರಳು ಅಧ್ಯಯನ ಗೈದು ತಮ್ಮ ಜ್ಞಾನದ ಸಾಮರ್ಥ್ಯವನ್ನು ಅಳೆಯುವ ಮೂರು ತಾಸಿನ ಪರೀಕ್ಷೆ ವಿದ್ಯಾರ್ಥಿಗಳ ಮನದಾಳದಲ್ಲಿ ತಲ್ಲಣ ಉಂಟು ಮಾಡುವುದು ಸಹಜ. ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆಯ ಗೊಂದಲ ಹಾಗೂ ಮನದ ತೊಳಲಾಟಗಳನ್ನು ಹೋಗಲಾಡಿಸಲು ಶೈಕ್ಷಣಿಕ ವರ್ಷದುದ್ದಕ್ಕೂ ನಡೆಯುವ ೩ ತಿಂಗಳ ಪರೀಕ್ಷೆ (ಈಖಿ), ೬ ತಿಂಗಳ ಪರೀಕ್ಷೆ (Sಖಿ), ೯ ತಿಂಗಳ ಪರೀಕ್ಷೆ (Pಖಿ) ಹಾಗೂ ಕೊನೆಯದಾಗಿ ವಾರ್ಷಿಕ ಪರೀಕ್ಷೆ. ಯಾವ ವಿದ್ಯಾರ್ಥಿಗಳು ಮೂರು ಪರೀಕ್ಷೆಗಳಿಗೆ ಹಾಜರಾಗಿರುತ್ತಾರೋ ಅವರಲ್ಲಿ ಸುಲಭವಾಗಿ ಧೈರ್ಯದಿಂದ ಪ್ರಶ್ನೆ ಪತ್ರಿಕೆಗಳಲ್ಲಿರುವ ಅನೇಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಬರೆಯುತ್ತಾರೆ. ವಿದ್ಯಾ ಕೇಂದ್ರಗಳಿಂದ ನಡೆಯುವ ಪರೀಕ್ಷೆಗಳು ವಿದ್ಯಾರ್ಥಿಗಳ ಕಲಿಕೆ ತೀವ್ರಗೊಳ್ಳುವದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆದು ಅಂಕಗಳಿಸುವದರಲ್ಲಿ ತೊಡಗುತ್ತಾರೆ. ಅಲ್ಲದೇ ೫ ವರ್ಷದ ಪ್ರಶ್ನೆ ಪತ್ರಿಕ್ಷೆಗಳನ್ನು ಬಿಡಿಸುತ್ತಾ, ಹೆಚ್ಚು ಅಂಕ ಗಳಿಸಬೇಕೆಂಬ ಛಲದಂಕ ಮಲ್ಲರಾಗಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಭಯಪಡುವದು ಸಹಜ ಆದಾಗ್ಯೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅಧ್ಯಯನಶೀಲದೊಂದಿಗೆ ಕೆಲವು ಮಹತ್ವದ ನಿಯಮಗಳನ್ನು ಹಾಗೂ ಶಿಸ್ತುಬದ್ಧ ಅಂಶಗಳನ್ನು ಪಾಲಿಸಲೇಬೇಕು.
ಪರೀಕ್ಷಾ ಹಾಲಿಗೆ ೧೫ ರಿಂದ ೨೦ ನಿಮಿಷ ಮುಂಚಿತವಾಗಿ ಹಾಜರಾಗಬೇಕು.
ಹಾಲ್ ಟಿಕೇಟ ನಕಲು ಪ್ರತಿ ಮನೆಯಲ್ಲಿಟ್ಟು ಅಸಲಿ ಪ್ರತಿಯನ್ನು ಪರೀಕ್ಷೆಗೆ ತಪ್ಪದೇ ತರಬೇಕು.
ಗುರುತಿನ ಚೀಟಿ ಕೊರಳಲ್ಲಿ ಹಾಕಿಕೊಳ್ಳಬೇಕು.
ಎಲೆಕ್ಟ್ರಾನಿಕ್ ವಸ್ತುಗಳು, ವಾಚ್, ಮೊಬೈಲ್ಫೋನ್ ಹಾಗೂ ಬ್ಲೂಟೂತ್ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬಾರದು.
ಪರೀಕ್ಷಾ ಕೊಠಡಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಚೀಟಿ, ಝರಾಕ್ಸ ಕಾಫಿ, ನೋಟ್ಸ ಒಯ್ಯಕೂಡದು.
ಹಾಲ್ ಟಿಕೆಟ್ನಲ್ಲಿರುವ ಸೀಟ್ ನಂಬರ್ ತಾವು ಕುಳಿತುಕೊಳ್ಳುವ ಸೀಟ್ ಸರಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು.

ಮುಂಚಿತವಾಗಿ ನೀಡುವ ಪ್ರಶ್ನೆಪತ್ರಿಕೆಯ ಎಲ್ಲಾ ಪ್ರಶ್ನೆಗಳನ್ನು ಶಾಂತಚಿತ್ತದಿಂದ ಓದಬೇಕು.
ತಮಗೆ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಿದಂತೆ ನಿಮ್ಮ ಬುದ್ಧಿಶಕ್ತಿಯ ಸುರುಳಿ ಬಿಚ್ಚುತ್ತಾ ಹೋಗುತ್ತದೆ.
ಪರೀಕ್ಷಾ ವೇಳೆಯಲ್ಲಿ ತಾವು ತಾವಾಗಿರದೇ ಪ್ರಶ್ನೆ ಉತ್ತರ ಬರೆಯುವದರಲ್ಲಿ ತನ್ಮಯರಾಗಿರಬೇಕು.
ವಿಚಕ್ಷಕದಳ – ಇನ್ನಿತರ ಪರೀಕ್ಷಾ ಅಧಿಕಾರಿಗಳ ಬಗ್ಗೆ ಗಮನ ಹರಿಸಬಾರದು.
ವಿದ್ಯಾರ್ಥಿಗಳೇ, ತಮಗೆ ಉತ್ತರ ಪತ್ರಿಕೆಗಳನ್ನು ಕೊಟ್ಟ ನಂತರ ತಮ್ಮ ಹಾಲ್ ಟಿಕೆಟ್ ನಂಬರನ್ನು ಬಾಕ್ಸನಲ್ಲಿ ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು. ಒಂದು ಪ್ರಶ್ನೆ ಪತ್ರಿಕೆಯು ಸರಳತೆ ಹಾಗೂ ಕಠಿಣತೆಯಿಂದಲೂ ಕೂಡಿರುತ್ತದೆ. ವಿದ್ಯಾರ್ಥಿಗಳು ಅಂಜದೇ, ಅಳುಕದೇ ಧೈರ್ಯದಿಂದ ಉತ್ತರ ಬರೆಯಬೇಕು. ಒಂದು ಪ್ರಶ್ನೆಪತ್ರಿಕೆಯನ್ನು ಗಮನಿಸಿದರೆ ವಸ್ತುನಿಷ್ಠ ಪ್ರಶ್ನೆಗಳು, ನಿಮ್ಮ ಸ್ಮರಣೆ ಹಾಗೂ ಸ್ಪಷ್ಟ ನಿರ್ಧಾರವನ್ನು ತಿಳಿಯಬಯಸುತ್ತದೆ. ಅದೇ ರೀತಿ ಸಂಕ್ಷೀಪ್ತ ಉತ್ತರ ಬಯಸುವ ಪ್ರಶ್ನೆಗಳು ನೆನಪು ಮತ್ತು ಬರವಣಿಗೆಯನ್ನು ನಿರ್ಧರಿಸುತ್ತದೆ. ಅದೇ ರೀತಿ ಕೊನೆಯದಾಗಿ ಪ್ರಬಂಧ ರೀತಿ ಪ್ರಶ್ನೆಗಳು,
ನಿಮ್ಮ ಸುಂದರವಾದ ಕೈಬರಹ
ವಿಷಯ ಸಂಗ್ರಹಣೆ
ಬರೆಯುವ ಶೈಲಿ ಮತ್ತು ಕೌಶಲ್ಯ
ವಿಷಯ ಪ್ರತಿಪಾದಿಸುವ ರೀತಿ
ಪ್ರಶ್ನೆಗೆ ತಕ್ಕಂತೆ ನೇರ ಉತ್ತರ
ಬರವಣಿಗೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನ ಮಹತ್ವ ಪಡೆಯುತ್ತದೆ.
ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ರೇಖಾ ಚಿತ್ರಗಳು ಫಾರ್ಮುಲಾಗಳು ವ್ಯಾಖ್ಯಾನುಗಳನ್ನು ಬರೆಯುವ ಶೈಲಿ ಇನ್ನಿತರ ಎಲ್ಲಾ ಅಂಶಗಳು ಮೌಲ್ಯಮಾಪನದ ಕಾರ್ಯದಲ್ಲಿ ಗಮನಕ್ಕೆ ಬರುತ್ತವೆ.
ನಮ್ಮ ಘನಸರ್ಕಾರ ಪರೀಕ್ಷಾ ವೇಳೆಯಲ್ಲಿ ಬಿಗಿಯಾದ ಕಾಯ್ದೆ ಕಾನೂನುಗಳನ್ನು ತಂದು ಪ್ರಶ್ನೆ ಪತ್ರಿಕೆಗಳ ಸೋರಿಕೆ ಪರೀಕ್ಷಾ ಗೊಂದಲಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ. ಆದ್ದರಿಂದ ಇಂದಿನ ಎಲ್ಲಾ ಪರಿಕ್ಷಾ ಕೊಠಡಿಗಳಲ್ಲಿ ವೆಬ್ಕಾಸ್ಟ ತಂತ್ರಜ್ಞಾನ ಅಳವಡಿಸಲಾಗಿದೆ, ವಿದ್ಯಾರ್ಥಿಗಳು ಬರುವ ವಾರ್ಷಿಕ ಪರೀಕ್ಷೆಗೆ ಮಾನಸಿಕ ಸಿದ್ದತೆಯಿಂದ ಹೆಚ್ಚು ಅಧ್ಯಯನಶೀಲರಾಗಿ ಧೈರ್ಯದಿಂದ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಿ ವಿದ್ಯಾ ಸಂಸ್ಥೆಗೆ, ಪಾಲಕರಿಗೆ ಕೀರ್ತಿ ತಂದು ತಮ್ಮ ಸುಂದರವಾದ ಭವಿಷ್ಯವನ್ನು ರೂಪಿಸಲೆಂದು ಆಶಿಸುವೆ.
