ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಸಲುವಾಗಿ ಸರ್ಕಾರ ಅನೇಕ ಕಾನೂನು ಕಾಯಿದೆಗಳು ಜಾರಿಗೆ ತಂದರು ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಹಜಾದ್ ಕಾಗಲ್ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶನಿವಾರ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಉಜ್ವಲ ಸಂಸ್ಥೆಯ ಆಯ್ಎಲ್ಪಿ ಯೋಜನೆಯ ಸಹಯೋಗದಲ್ಲಿ ಜರುಗಿದ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಯ ರಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಬಾಲ ಕಾರ್ಮಿಕ, ಮಕ್ಕಳ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದು ಇಂತಹ ಪ್ರಕರಣಗಳು ಇನ್ನೂ ಜೀವಂತವಾಗಿವೆ ಇವುಗಳನ್ನು ಸಂಪೂರ್ಣವಾಗಿ ಅಳಿದು ಸುಸ್ಥಿರ ಸಮಾಜ ನಿರ್ಮಿಸಲು ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಯ ರಚನೆ ಅನಿವಾರ್ಯವಾಗಿದೆ ಈ ಸಮಿತಿಯಲ್ಲಿ ಒಟ್ಟು 17ಜನ ಸದಸ್ಯರಿದ್ದು ನಾವೆಲ್ಲರೂ ಸಮುದಾಯದ ಜನರಿಗೆ ತಿಳುವಳಿಕೆ ಹೇಳಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಸಂಪೂರ್ಣ ಜವಾಬ್ದಾರರಾಗೋಣ ಎಂದರು
ಉಜ್ವಲ ಸಂಸ್ಥೆಯ ಐಎಲ್ಪಿ ಯೋಜನೆಯ ತಾಲ್ಲೂಕು ಸಂಯೋಜಕ ಸಾಗರ ಘಾಟಗೆ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಣೆ ಮಾಡಲು ಇರುವ ಕಾಯ್ದೆಗಳಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳು ನಿಲ್ಲಿಸಲು ಆಗುತ್ತಿಲ್ಲ. ಕಾಯ್ದೆ, ಕಾನೂನುಗಳಿಗಿಂತಲೂ ಜನರಿಗೆ ಅರಿವು ಅತಿ ಅವಶ್ಯವಾಗಿದೆ ಇಂದು ನಾವು ಈ ಸಮಿತಿ ರಚನೆ ಮಾಡಿ ಮಕ್ಕಳಿಗೆ ಎಲ್ಲಾ ಅವಕಾಶಗಳನ್ನು ಒದಗಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸುತ್ತಾ ,ಕಾವಲು ಸಮಿತಿಯನ್ನು ರಚನೆ, ಹುದ್ದೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ತಿಳಿಸಿದರು.
ಸಭೆಯಲ್ಲಿ ಶಶಿಕಾಂತ ಸುಂಗಠಾಣ, ಸಂಗಮ್ಮಾ ಶಂಬೇವಾಡಿ, ಪ್ರೇಮಾ ಕುಳೇಕುಮಟಗಿ, ಜಯಶ್ರೀ ಮಠಪತಿ, ಹೊನ್ನಮ್ಮ ಚವ್ಹಾಣ, ಶೈಲಾ ಬಿರಾದಾರ, ಶೇಖರ ಇದ್ದರು.
ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸದಸ್ಯರು
ಶೈನಾಜಬಿ ಬ್ಯಾಕೋಡ (ಅಧ್ಯಕ್ಷೆ ), ಮಹೆಜನಬಿ ತುರಕನಗೇರಿ (ಉಪಾಧ್ಯಕ್ಷೆ), ಮಹಾನಂದ ನಾಯ್ಕಲ್ , ಪ್ರೇಮಾ ಚವ್ಹಾಣ , ಎಸ್.ಬಿ. ಜೋಶಿ ,ವೈ.ಎಸ್. ಮನವಳ್ಳಿ ,ಎ.ಟಿ. ಗುಬ್ಬೆವಾಡ, ಕೆ.ಎಸ್.ಕಟ್ಟಿಮನಿ, ಪಿ.ಎಸ್. ಬಿರಾದಾರ, ಎಸ್.ಎಸ್. ಬಿರಾದಾರ, ಶಹಜಾನ್ ಕಾಗಲ್, ಎಸ್.ಎಸ್ ಘಾಟಗೆ, ಡಿ.ಬಿ ನಂದಗೌಡರ, ಸಂಗಮ್ಮ ದಿಂಡವಾರ, ರೂಪಾ ಸುಂಬಡ, ಶ್ರೀಶಾ ಜೋಶಿ – ಸದಸ್ಯರು, ಕೆ.ಎಸ್. ಕಡಕಭಾವಿ- ಕಾರ್ಯದರ್ಶಿಗಳು.

