ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ಸ್ಥಾಯಿ ಸಮೀತಿಗೆ ನೂತನ ಅಧ್ಯಕ್ಷರನ್ನಾಗಿ ಯಲ್ಲಪ್ಪ ನಾಯಕಮಕ್ಕಳ ಅವರು ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಹಣಮಂತ ಭೋವಿ ಸೂಚಕರಾಗಿ, ಶರೀಫಾ ಮೂಲಿಮನಿ ಅನುಮೋದಕರಾಗಿದ್ದರು. ಇವರ ಬಳಿಕ ನಿಗಧಿತ ಅವಧಿಯಲ್ಲಿ ಮತ್ತಾವುದೇ ನಾಮಪತ್ರ ಸಲ್ಲಿಕೆಯಾಗದಿದ್ದರಿಂದ ಯಲ್ಲಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ತಿಳಿಸಿದರು.
ಆದ್ಯಕ್ಷ ಘೋಷಣೆಯಾಗುತ್ತಿದ್ದಂತೆಯೇ ಅಧ್ಯಕ್ಷರಿಗೆ ಸಿಹಿ ತನ್ನಿಸಿ, ಸನ್ಮಾನಿಸಿ ಗೌರವಿಸುವ ಮೂಲಕ ಯಲ್ಲಪ್ಪ ಅವರ ಆಪ್ತ ಸದಸ್ಯರು, ಸ್ನೇಹಿತರು, ಹಿತೈಶಿಗಳು ಸಂಭ್ರಮಿಸಿದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮಾಜಿ ಉಪಾಧ್ಯಕ್ಷೆ ಶಹಾಜಾದಬಿ ಹುಣಚಗಿ, ಸದಸ್ಯರಾದ ಭಾರತಿ ಪಾಟೀಲ, ಪ್ರತಿಭಾ ಅಂಗಡಗೇರಿ, ಸೋನಾಬಾಯಿ ನಾಯಕ, ಸಾಹೀರಾಭಾನು ಢವಳಗಿ, ಚಾಂದಬಿ ಮಕಾನದಾರ, ಶರೀಫಾ ಮೂಲಿಮನಿ, ಸಂಗಮ್ಮ ದೇವರಳ್ಳಿ, ರಿಯಾಜ ಢವಳಗಿ, ವಿರೇಶ ಹಡಲಗೇರಿ, ಶಿವು ಶಿವಪೂರ ಪ್ರಮುಖರಾದ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸಂಗನಗೌಡ ಬಿರಾದಾರ, ರಾಜು ಕರಡ್ಡಿ, ಶ್ರೀಶೈಲ್ ಪೂಜಾರಿ, ಗೋಪಿ ಮಡಿವಾಳರ, ಸಂತೋಷ ನಾಯಕ, ಜಬ್ಬರ ಗೋಲಂದಾಜ, ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ ಸೇರಿದಂತೆ ಹಲವರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

