ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜ.೯ ರಿಂದ ೭ ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಜ.೯ ರಂದು ಬೆಳಿಗ್ಗೆ ೮ಕ್ಕೆ ಗೋಮಾತಾ ಪೂಜಾ ಕಾರ್ಯಕ್ರಮ. ೧೦ಕ್ಕೆ ನೂತನ ತೇರಿನ ಉದ್ಘಾಟನೆ ಮತ್ತು ಯಾತ್ರಿ ನಿವಾಸ ಶಂಕುಸ್ಥಾಪನೆ ಹಾಗೂ ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ, ೧ಕ್ಕೆ ಮಹಾಪ್ರಸಾದ, ಸಂಜೆ ೫:೩೦ಕ್ಕೆ ಹುಚ್ಚಯ್ಯನ ಕಳಸವನ್ನು ಸಕಲ ವಾದ್ಯ ವೈಭವಗೋಂದಿಗೆ ದೇವಸ್ಥಾನಕ್ಕೆ ಕರೆತರುವುದು. ೭:೩೦ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.
ಜ.೧೦ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಬಣ್ಣ ಬಣ್ಣದ ಬಳೆಗಳಿಂದ ಅಲಂಕರಿಸುವುದು. ೧೨ಕ್ಕೆ ಎತ್ತು ಮತ್ತು ಕುದುರೆಗಳ ೩ನಿಮಿಷದ ಜೋಡಿ ಓಟದ ಸ್ಪರ್ದೆ, ೩ಕ್ಕೆ ಜೋಡು ಎತ್ತಿನ ಗಾಡಿಯ ೪ಕಿಮೀ ಓಟದ ಸ್ಪರ್ದೆ, ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.
ಜ೧೧ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಹೂ ಹಣ್ಣು ಮತ್ತು ಕಾಯಿಪಲ್ಲೆಗಳಿಂದ ಅಲಂಕಾರ, ಸಂಜೆ ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ, ೭-೩೦ಕ್ಕೆ ಮಹಾ ಪ್ರಸಾದ ೮ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ.
ಜ೧೨ ರಂದು ಬೆಳಿಗ್ಗೆ ೪ಕ್ಕೆ ದೇವಿಗೆ ರುದ್ರಾಭಿಷೇಕ, ೫:೩೦ಕ್ಕೆ ಚಂಡಿ ಹವನ ಪ್ರಾರಂಭ, ೧೦ಕ್ಕೆ ಹವನ ಪೂರ್ಣಾಹುತಿ, ೧ಕ್ಕೆ ಮಹಾಪ್ರಸಾದ, ೨:೩೦ ಕ್ಕೆ ಅಗ್ನಿ ಪೂಜಾಮಹೋತ್ಸವ, ೫ಕ್ಕೆ ಪುರವಂತರ ಮೆರವಣಿಗೆ ಬಳಿಕ ಅಗ್ನಿ ಪ್ರವೇಶ ರಾತ್ರಿ ೮:೩೦ಕ್ಕೆ ಮಹಾ ಪ್ರಸಾದ,
ಜ.೧೩ ರಂದು ಬೆಳಿಗ್ಗೆ ೪ಕ್ಕೆ ದೇವಿಗೆ ಮಹಾರುದ್ರಾಭಿಷೇಕ, ೧ಕ್ಕೆ ಅನ್ನಸಂತರ್ಪಣೆ, ೩ಕ್ಕೆ ದೇವಿಯ ರಥೋತ್ಸವ ಕಳಸವು ಗಂಗಸ್ಥಳಕ್ಕೆ ತೆರಳುವದು. ೫ಕ್ಕೆ ರಥೋತ್ಸವದ ಹಗ್ಗದ ಮೆರವಣಿಗೆ ಜೊತೆಗೆ ಕಳಶವು ದೇವಸ್ಥಾನಕ್ಕೆ ಬರುವದು. ೬ಕ್ಕೆ ಮಹಾರಥೋತ್ಸವ, ೭:೩೦ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ.
ಜ೧೪ ರಂದು ಓಕಳಿ ಹಬ್ಬ, ಜ೧೫ ರಂದು ದೇವಿಯ ರಥದ ಕಳಸಾವರೋಹಣ ಸಂಜೆ ೫ಕ್ಕೆ ಕಳಸವನ್ನು ಇಳಿಸುವದು, ಹೀಗೆ ಜಾತ್ರಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಿದ್ದು ಭಕ್ತಾದಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
