ಡಾ.ಎಂ.ಎಂ.ಕಲಬುರ್ಗಿ ಅವರ ಸೃಜನ ಸಾಹಿತ್ಯ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶರಣರ ಪರಂಪರೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಡಾ.ಕಲಬುರ್ಗಿ ಅವರು ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೇಳಿದ್ದಾರೆ ಎಂದು ಚಡಚಣ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ ಹೇಳಿದರು.
ಅವರು ಪಟ್ಟಣದ ಮಾಂಗಲ್ಯ ಭವನದಲ್ಲಿ ಕರ್ನಾಟಕ ಸರ್ಕಾರದ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗು ವಿಜಯಪುರದ ಕಲಬುರ್ಗಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಡಾ.ಎಂ.ಎಂ.ಕಲಬುರ್ಗಿ ಅವರ ಸೃಜನ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಸಮಾರಂಭದಲ್ಲಿ ಕಲಬುರ್ಗಿ ಅವರು ರಚಿಸಿದ ಕೆಟ್ಟಿತ್ತು ಕಲ್ಯಾಣ ಎಂಬ ನಾಟಕದ ಕುರಿತಾಗಿ ಮಾತನಾಡಿದರು.
ಅವರದು ಚಲನಶೀಲವಾದ ಸಂಶೋಧನೆ. ಸುಮಾರು ೧೨ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಡಾ.ಕಲಬುರ್ಗಿ ಅವರ ಕಾವ್ಯವಾದ ನೀರು ನೀರಡಿಸಿತ್ತು ಮತ್ತು ನೀರಾಗ ನಿಂತೀನಿ ನಿರಡಿಸಿ ಕಾವ್ಯದ ಕುರಿತು ಕಲಕೇರಿಯ ಸಾಹಿತಿ ಮನು ಪತ್ತಾರ ಮಾತನಾಡಿ, ಕವಿಯಾದವನು ಭಾವನೆಗಳನ್ನು ಕಲ್ಪಿಸಿಕೊಂಡು ಬರೆಯುವದು ಬೇರೆ, ಬದುಕಿ ಬರೆಯುವುದು ಬೇರೆ. ನೀರು ನೀರಡಿಸಿತ್ತು ಕವನ ಸಂಕಲನದಲ್ಲಿನ ಎಲ್ಲ ಕನವಗಳು ಸಾಮಾನ್ಯವಾಗಿ ಅವರು ಅವರ ಬದುಕಿನಲ್ಲಿ ಕಂಡ ಭಾವನೆಗಳ ಭಾಷಾ ಶಿಲ್ಪವೆನಿಸಿವೆ ಎಂದರು.
ಇದೇ ಸಂಧರ್ಭದಲ್ಲಿ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಸದಸ್ಯೆ ಹನುಮಾಕ್ಷಿ ಗೋಗಿ ಆಶಯ ನುಡಿಗಳನ್ನಾಡಿದರು.
ಸಾನಿಧ್ಯ ವಹಿಸಿದ ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಪ್ರತಿಷ್ಠಾನದ ಸದಸ್ಯ ಗದುಗಿನ ಪ್ರೋ.ಚಂದ್ರಶೇಖರ ವಸ್ತçದ, ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯೂಜಿಲೆಂಡಿನ ಆಕ್ಲೆöಡ್ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಸ್ವಾಗತಿಸಿದರು. ಶಿವಲಿಂಗ ಕಲಬುರ್ಗಿ ವಂದಿಸಿದರು. ಶಿಕ್ಷಕ ಚಿದಂಬರ ಬಂಡಗಾರ ನಿರೂಪಿಸಿದರು

